ನೆನಪಿನಂಗಳದಿಂದ ಒಂದಿಷ್ಟು
ನಾ ಹಿಡಿಯದ ಹಾದಿ
ಅಲ್ಲೊಂದು ದಾರಿ
ಆ ದಾರಿಯ ಹಿಡಿದು ಸಾಗುವುದು ಎನಗೊಳಿತೆ?
ಅರಿವಿರಲಿಲ್ಲವೆನಗೆ.
ಕಲ್ಲಿರಬಹುದು ಮುಳ್ಳಿರಬಹುದು
ಕಷ್ಟ ಕೋಟಲೆಗಳೆದುರುಗೊಳ್ಳಬಹುದು
ಸುಮ್ಮನೇಕೆ ಇಲ್ಲದ ಉಸಾಬರಿ ಎನಗೆ?
ಮರುಯೋಚನೆಯಿಲ್ಲದೆ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಆ ದಾರಿಯ ಕಂಡಾಗೆಲ್ಲ ತಿರು ತಿರುಗಿ ನೋಡುವ ಹುಚ್ಚು
ಹಿಡಿದು ಸಾಗಲೇ ಆ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನೂರಾರು ಪ್ರಶ್ನೆಗಳು ಮನದಲ್ಲಿ ಸುಳಿದು
ನನ್ನದೇ ಯೋಚನೆಗೆ ನನ್ನ ಸಮ್ಮತವಿಲ್ಲದೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಹೊರಳಿತು ಆ ಹಿಡಿಯದ ಹಾದಿಯ ಕಡೆಗೆ.
ತಿರು ತಿರುಗಿ ನೋಡಿದಾಗ
ಕಲಾವಿದನ ಕುಂಚದಲ್ಲರಳಿದ ಕಲೆಯ ಚೆಲುವು
ಕಲ್ಪನೆಯಲಿ ಹುಟ್ಟಿ
ಹೂವು ಹಾಸಿದ ನೆಲವಾಗಿರಬಹುದು
ಹಿಡಿದು ಸಾಗಲೇ ಆ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನನ್ನ ದಾರಿಯ ನೆನಪಾಗೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಇಂದು ನಡೆದುಬಿಡಬೇಕು ಆ ಹಿಡಿಯದ ಹಾದಿಯಲಿ
ಅನ್ನಿಸಿದೊಡನೆಯೇ ಹೊರಟು ನಿಂತೆ.
ಹಾದಿಗೆದುರಾಗಿ ನಿಂತು ನೋಡಲು
ಅಂದು ಬೇಲಿ ಹಾಕಿದೆ ಆ ಹಾದಿಗೆ.
ಮತ್ತೆ ಮರಳುವ ಮನಸಿಲ್ಲವಾದರೂ
ನಡೆಯಲೇಬೇಕಿತ್ತು ಮರಳಿ ನನ್ನದೇ ಹಳೆಯ ದಾರಿಯಲಿ ನಾ.
ಬಿಟ್ಟರೂ ಬಿಡದೆನ್ನುವ ಮೋಹ
ಆ ಹಿಡಿಯದ ಹಾದಿಯೆಡೆಗೆ
"ಬೇಲಿ ಹಾರಿದರೆ ಸಾಗಬಹುದಲ್ಲ" ಕೂಗಿ ಹೇಳಿತು ಮನವು.
ನನ್ನನಾವರಿಸಿದ ನೂರು ಪ್ರಶ್ನೆಗಳು ಕರಗಿ
ಮನವು ಹಗುರಾಗಿ
ಹೊರಟು ನಿಂತೆನು ಮತ್ತೆ
ಹಿಡಿಯದ ಆ ಹಾದಿಯಲಿ ಸಾಗಲನುವಾಗಿ.
ಆ ಹಾದಿಯೆದುರಲಿ ಬಂದು ನಿಂತು ಹೆಜ್ಜೆ ಮುಂದಿಡುತಿರಲು
ಸುತ್ತ ನೋಡಿದರೆ ಸುತ್ತುವರಿದಾ ಜನರು
ಅತ್ತ ಹೋಗಲು ಬಿಡದೆ ಎಳೆಯುತಿದ್ದರು ನನ್ನ
ಎಡಕೊಮ್ಮೆ ಬಲಕೊಮ್ಮೆ .
ನನ್ನ ಕೂಗು ಮೂಕವಾಯಿತು
ಹೆಜ್ಜೆ ಕುರುಡಾಯಿತು
ಯಾರದೋ ಹೆಜ್ಜೆ ಸಾಗಿದೆಡೆ ನನ್ನದೂ ಹೆಜ್ಜೆ ಸಾಗಿ
ಪಯಣ ಆರಂಭವಾಯಿತು ಮತ್ತದೇ ಹಳೆಯ ದಾರಿಯಲಿ.
ಎಂದೂ ಹಿಡಿಯದ ಆ ಹಾದಿಗೆ ಬೆನ್ನು ತಿರುಗಿಸಿ ನಾ ಹೊರಟೆ
ಆ ಹಾದಿ ನಾ ಹಿಡಿಯದ ಹಾದಿಯಾಗಿಯೇ ಉಳಿದುಹೊಯ್ತು.
Categories: ಕನ್ನಡ ಪುಟಗಳು
ಮುಸ್ಸಂಜೆಯ ನೆನಪು
ಮಣ್ಣ ಹಣತೆಯ ಎಣ್ಣೆ ಬತ್ತಿಯ
ಪುಟ್ಟ ದೀಪಕ್ಕೆ
ಮುಸ್ಸಂಜೆಯ ನೆನಪು
ಬಾ ಎಂದು ಕರೆಯುತಲಿತ್ತು ಮುಸ್ಸಂಜೆಯನು
ಬಾನಲ್ಲಿ ರವಿ ಜಾರುವ ಮುನ್ನವೇ.
ಮುಸ್ಸಂಜೆಯ ಮಬ್ಬುಗತ್ತಲಿಗೋ
ದೀಪವೆಂದರೆ ಒಲವು
ತನ್ನನಾವರಿಸಿ ಬೆಳಗು ನೀಡುವುದು ದೀಪ ತಾನೆ?
ಕಾಯುವಿಕೆಯು ಕೊನೆಗೊಂಡು
ಹೊತ್ತು ಕಂತು ಮಬ್ಬು ಕವಿದಾ ವೇಳೆ
ದೀಪ ನಂದಿತು ಏಕೆ?
ದೀಪಕ್ಕೆ ಮುಸ್ಸಂಜೆಯ ನೆನಪು
ಬರಿಯ ನೆಪವಷ್ಟೆಯೇನು?
[ಅವತ್ತು ಯಾವತ್ತೋ ಒಂದು ದಿನ ಮನಸಲ್ಲಿ ಮೂಡಿದ ಸಾಲುಗಳು. ಇವಿಷ್ಟೇ ಬರ್ದಿದ್ದು ಅಥವಾ ಮುಂದೆ ಬರಿಯಬೇಕು ಅನ್ನಿಸಲಿಲ್ಲ . ಅಪೂರ್ಣವಾದ ಕವಿತೆ?!! ]
ಪುಟ್ಟ ದೀಪಕ್ಕೆ
ಮುಸ್ಸಂಜೆಯ ನೆನಪು
ಬಾ ಎಂದು ಕರೆಯುತಲಿತ್ತು ಮುಸ್ಸಂಜೆಯನು
ಬಾನಲ್ಲಿ ರವಿ ಜಾರುವ ಮುನ್ನವೇ.
ಮುಸ್ಸಂಜೆಯ ಮಬ್ಬುಗತ್ತಲಿಗೋ
ದೀಪವೆಂದರೆ ಒಲವು
ತನ್ನನಾವರಿಸಿ ಬೆಳಗು ನೀಡುವುದು ದೀಪ ತಾನೆ?
ಕಾಯುವಿಕೆಯು ಕೊನೆಗೊಂಡು
ಹೊತ್ತು ಕಂತು ಮಬ್ಬು ಕವಿದಾ ವೇಳೆ
ದೀಪ ನಂದಿತು ಏಕೆ?
ದೀಪಕ್ಕೆ ಮುಸ್ಸಂಜೆಯ ನೆನಪು
ಬರಿಯ ನೆಪವಷ್ಟೆಯೇನು?
[ಅವತ್ತು ಯಾವತ್ತೋ ಒಂದು ದಿನ ಮನಸಲ್ಲಿ ಮೂಡಿದ ಸಾಲುಗಳು. ಇವಿಷ್ಟೇ ಬರ್ದಿದ್ದು ಅಥವಾ ಮುಂದೆ ಬರಿಯಬೇಕು ಅನ್ನಿಸಲಿಲ್ಲ . ಅಪೂರ್ಣವಾದ ಕವಿತೆ?!! ]
Categories: ಕನ್ನಡ ಪುಟಗಳು
ಅವಳು ರಾಧೆಯಲ್ಲ
"ಕೃಷ್ಣ"
ಅವಳಿಗೆ , ಆ ಒಂಭತ್ತರ ಬಾಲೆಗೆ ಕೃಷ್ಣನೆಂದರೆ ಸಾಕು ಕಣ್ಣರಳುವುದು. ಕೃಷ್ಣ ಅವಳ ಆತ್ಮ , ಕೃಷ್ಣ ಅವಳ ನಗು, ಕೃಷ್ಣ ಅವಳ ಖುಷಿ. ಅವಳಿಗೆ ಏಕಾಂತವೆಂದರೆ ಏನೆಂದು ತಿಳಿಯದು , ಏಕೆಂದರೆ ಅವಳ ಏಕಾಂತದಲ್ಲೂ ಕೃಷ್ಣನಿರುವನು ಅವಳ ಜೊತೆಗೆ. ಕೃಷ್ಣ ಅವಳ ಮಾನಸ ಮಿತ್ರ. ಅವಳ ಖುಷಿ, ನಗು, ದುಃಖ , ಅಳು ಎಲ್ಲದರಲ್ಲಿ ಇರುವುದು ಕೃಷ್ಣನೇ. ಖುಷಿಯಾದಾಗ ಕೃಷ್ಣನೊಡನೆ ಮಾತನಾಡುವಳು ತನ್ನೊಳಗೇ. ದುಃಖವಾದಾಗಲೂ ನೆನೆವುದು ಕೃಷ್ಣನನ್ನೇ , ಯಾಕೆ ಹೀಗೆ ಎಂದು ಕೇಳುವಳು ಅವನನ್ನೇ .
ಕೃಷ್ಣನ ಪೂಜಿಸಿ ಹಬ್ಬ ಮಾಡಲು ಅವಳಿಗೆ ಕೃಷ್ಣಾಷ್ಟಮಿಯೇ ಆಗಬೇಕಿಲ್ಲ . ಅವಳಿಗೆ ಅನ್ನಿಸಿದಾಗಲೆಲ್ಲ ಕೃಷ್ಣನನು ಪೂಜಿಸುವ ಸಂಭ್ರಮ . ಅವಳ ಆ ಕೃಷ್ಣನ ವಿಗ್ರಹಕ್ಕೆ ಸಡಗರದ ಪೂಜೆ. ವಿಗ್ರಹ ! ಅದೆಂಥ ದಿವ್ಯ ಕಳೆಯಿರುವ ಕೃಷ್ಣನ ವಿಗ್ರಹ. ಅವಳು ಐದರ ಬಾಲೆಯಾಗಿದ್ದಾಗ ಅಜ್ಜ ತಂದುಕೊಟ್ಟಿದ್ದು. ಆಗಿನಿಂದ ಅವಳಿಗೆ ಆ ವಿಗ್ರಹದ ಮೇಲೆ ಅದೇನೋ ಮೋಹ. ಅವಳಿಗೆ ಅದು ಬರಿಯ ವಿಗ್ರಹವಲ್ಲ . ಅದು ಕೃಷ್ಣನೆಂದೇ ಅವಳ ನಂಬಿಕೆ . ಆ ವಿಗ್ರಹ ಜೊತೆಯಿದ್ದರೆ ಕೃಷ್ಣನೇ ಜೊತೆಯಿರುವನೆಂಬ ಭಾವ.
ಮಕ್ಕೆಳೆಲ್ಲ ಅದರೊಟ್ಟಿಗೆ ಆಡುವಾಗ ತನಗೆ ಅದರ ಮೇಲೆ ಜಾಸ್ತಿ ಅಧಿಕಾರವಿದೆ ಎಂದು ತನ್ನಷ್ಟಕ್ಕೆ ತಾನು ಅಂದುಕೊಳ್ಳುವಳು.
ಶಾಲೆಗೆ ರಜೆ ಬಂದರೆ ಸಾಕು ಪುಟ್ಟ ಮಂಟಪದಲ್ಲಿ ಕೃಷ್ಣನನ್ನಿಟ್ಟು , ಹೂವು ಮಾಲೆ , ಎಲೆಗಳಿಂದ ಸಿಂಗರಿಸುವಳು. ಎಲ್ಲರೊಟ್ಟಿಗೆ ಹಾಡಿ ಪಾಡಿ ನಲಿಯುವಳು. ಮಕ್ಕಳ ಆಟವಾ ಅದು? ನೋಡುವವರ ಕಣ್ಣಿಗೆ ಹಬ್ಬ!
ಅವಳ ಮುಗ್ಧ ಮನಸಿನಲ್ಲಿ ಕೃಷ್ಣನದೊಂದು ಪುಟ್ಟ ಲೋಕ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ , ಕೃಷ್ಣ ತನ್ನ ಆಪ್ತಗೆಳೆಯನೆಂದೇ ಕನಸಲ್ಲೂ ಮನಸಲ್ಲೂ ಕನವರಿಸುವವಳು.
ಅವತ್ತೊಂದು ದಿನ ಬೇಸಿಗೆಯ ಬೆಳಗಿನಲ್ಲಿ ಕೃಷ್ಣನೊಂದಿಗೆ ಆಡಿಕೊಂಡಿದ್ದಳು ಅವಳು. ಬೆಳ್ಬೆಳಿಗ್ಗೆ ಬಂದ ಪುರೋಹಿತರು ಅಜ್ಜನೊಂದಿಗೆ ಏನೋ ಮಾತಾಡುತ್ತಲಿದ್ದರು. ಸಮಯವಾಯಿತೆಂದು ಹೊರಟು ನಿಂತ ಅವರಿಗೆ ಅದೇನೋ ನೆನಪಾಯಿತು. ಮತ್ತೆನಿಂತರು. ಅಲ್ಲೇ ಮುಂದಿನ ಮನೆಯಲ್ಲಿ ಜರುಗುವ ಉಪನಯನ ಕಾರ್ಯಕ್ರಮಕ್ಕೆ ಹೊರಟವರು ಅವರು, ವಟುವಾದ ಹುಡುಗನಿಗೆ ಆಶಿರ್ವಾದಪೂರ್ವಕವಾಗಿ ಏನನ್ನಾದರೂ ಕೊಡುವುದು ಅವರ ವಾಡಿಕೆ . ಈ ಸಾರಿ ಮರೆತು ಬಂದಿದ್ದಾರೆ. "ಏನು ಕೊಡಲಿ ಈಗ ?" ಇವಳ ಅಜ್ಜನನ್ನು ಕೇಳಿದರು. ಅಜ್ಜ ಇನ್ನೂ ಯೋಚನೆಯಲ್ಲಿ ಇರುವಾಗಲೇ ಪುರುಹಿತರ ಕಣ್ಣು ಇವಳು ಆಡಿಕೊಂಡಿದ್ದ ಕೃಷ್ಣನವಿಗ್ರಹದ ಮೇಲೆ ಬಿತ್ತು. "ಈ ವಿಗ್ರಹ ಅವನಿಗೆ ಕೊಡಲು ಲಾಯಕ್ಕಾಗಿದೆ . ಈ ಪುಟ್ಟಿಗೆ ಇನ್ನೊಂದು ದಿನ ಇಂಥದ್ದೇ ತಂದುಕೊಟ್ರೆ ಆಯ್ತು. ಇದನ್ನೇ ಒಯ್ಯುತ್ತೇನೆ . ಆಗಬಹುದೇ? " ಎಂದರು ಅವರು. ಅಜ್ಜನಿಗೋ ಏನು ಹೇಳೋದೆಂದು ತಿಳಿಯದಾಯ್ತು . ಆ ಕೃಷ್ಣನೊಂದಿಗೆ ಅವಳ ನಂಟನ್ನು ಬಲ್ಲವರು ಅವರು. ಅವರು ಏನೋ ಹೇಳುವಷ್ಟರಲ್ಲಿ ಪುರೋಹಿತರು ಅವಳಲ್ಲಿ "ಇಲ್ಲಿ ಕೊಡಮ್ಮಒಮ್ಮೆ ಆ ವಿಗ್ರಹವನ್ನ " ಎನ್ನುತ್ತಾ ಕೈಗೆ ತೆಗೆದುಕೊಂಡರು . "ನಿಂಗೆ ನಿನ್ನ ಅಜ್ಜನ ಕೈಲಿ ಈಥರದ್ದೆ ಇನ್ನೊಂದು ಕೊಡಿಸುವುದಕ್ಕೆ ಹೇಳ್ತೀನಿ . ಈಗ ಇದನ್ನು ನಾನು ಒಯ್ಯುತ್ತೇನೆ ಆಯ್ತಾ " ಅನ್ನುತ್ತಾ ಹೊರಟರು .
ಅವಳ ಹೃದಯಬಡಿತವೇ ನಿಂತಂತಾಯ್ತು . ಅಳು ಒಮ್ಮೆಲೇ ಒತ್ತರಿಸಿಕೊಂಡು ಬಂತು. ಕಣ್ಣುಗಳು ತಂತಾನೇ ಹನಿಗೂಡಿದವು. ನೀರು ತುಂಬಿದ ಕಣ್ಣುಗಳಿಗೆ ಕೊನೆಯಬಾರಿ ಅವಳ ಕೃಷ್ಣ ಅಸ್ಪಷ್ಟವಾಗಿ ಕಂಡನು. " ನನ್ನ ಕೃಷ್ಣ ನನಗೆ ಬೇಕು, ನನಗೆ ಬೇಕು. " ಅವಳು ಅಳುತ್ತ ಓಡಿದಳು. ಆದರೂ ಅವರು ಹೊರಟು ಹೋದರು . ಅವಳ ಅಳು ಅವರಿಗೆ ಕೇಳಿಸಿತಾ ಅಥವಾ ಕೇಳಿಸಲಿಲ್ಲವಾ ? ಅವಳಿಗೆ ಗೊತ್ತಾಗಲಿಲ್ಲ.
ಮತ್ತೊಂದು ಕೃಷ್ಣ ವಿಗ್ರಹವನ್ನು ತಂದುಕೊಡುವೆನೆಂದು ಅಶ್ವಾಸನೆಯಿಡುತ್ತ ಸಮಾಧಾನಿಸಲು ಬಂದ ಅಜ್ಜನ ಮಾತುಗಳು ಅವಳಿಗೆ ರುಚಿಸಲಿಲ್ಲ . ಮನೆಯವರೆಲ್ಲ ಬಂದು ಸಮಾಧಾನ ಮಾಡಿದರೂ ಅವಳ ಅಳು ನಿಲ್ಲಲಿಲ್ಲ . ಅವಳು ಅತ್ತಳು . ಮತ್ತೆ ಮತ್ತೆ ಅತ್ತಳು. ಕೃಷ್ಣ ತನ್ನನ್ನು ಬಿಟ್ಟು ಹೋಗಿದ್ದು ಯಾಕೆಂದು ತಿಳಿಯದೇ ಕಣ್ಣೀರಿಟ್ಟಳು. ಮತ್ತೆ ಮತ್ತೆ ಅವನನ್ನು ಕೇಳಬೇಕು ಅನ್ನಿಸಿತು ದೂರ ಹೋಗಿದ್ದು ಯಾಕೆ ಎಂದು. ಆದರೆ ಹೇಗೆ ಕೇಳುವುದು ದೂರ ಹೋದ ಅವನನ್ನು.
ಕೃಷ್ಣ ಅಮೂರ್ತ ರೂಪ . ಅವನ ಮೂರ್ತಿಯಲ್ಲೇನಿದೆ ? ಕೃಷ್ಣನೆಂಬ ಭಾವ ಆತ್ಮದಲ್ಲಿ ಇದ್ದರೆ ಸಾಕು. ಆದರೆ ಆ ಮುಗ್ಧ ಕಂದನಿಗೆ ಮೂರ್ತ ಅಮೂರ್ತಗಳು ಹೇಗೆ ಅರ್ಥವಾಗಬೇಕು . ಆ ಕೃಷ್ಣನ ವಿಗ್ರಹವೇ ಅವಳ ಆತ್ಮ . ಅವಳ ಆತ್ಮವೇ ಅವಳ ಕೃಷ್ಣ. ಆತ್ಮವೇ ದೂರ ಹೋದರೆ?
ಅದಾದ ಮೇಲೆ ಅವಳ ನಿನ್ನೆ ಇಂದು ನಾಳೆಗಳೆಲ್ಲ ಬರೀ ದೂರವಾದ ಕೃಷ್ಣನ ನೆನೆದು ಚಿಂತಿಸುವದರಲ್ಲೇ ಕಳೆಯಿತು . ಎಲ್ಲಿರಬಹುದು ನನ್ನ ಕೃಷ್ಣ. ಅವರ ಮನೆಯಲ್ಲಿ ಹೊರಗೆ ಕಾಣುವಂತೆ ಇಟ್ಟಿರಬಹುದಾ ? ನೋಡುವ ಆಸೆಯಾಯ್ತು ಅವಳಿಗೆ. ಆಟವಾಡುವ ನೆಪದಲ್ಲಿ ಎದುರು ಮನೆಗೆ ಹೋದಾಗ ಅಲ್ಲೆಲ್ಲಾ ಹುಡುಕಿದಳು ಕೃಷ್ಣನನ್ನು. ಕೃಷ್ಣ ಎಲ್ಲೂ ಕಾಣದೇ ಮತ್ತದೇ ನಿರಾಸೆ ಅವಳ ಪಾಲಿಗೆ.
15 ವರ್ಷಗಳಲ್ಲಿ ಅದೆಷ್ಟೋ ಹಗಲುಗಳು ರಾತ್ರಿಗಳು ಕೃಷ್ಣನ ನೆನಪಲ್ಲೇ ಕಳೆದು ಹೋದವು. ಬೀಸುವ ಗಾಳಿ, ತಂಪಿನ ಮಳೆ ಹನಿ , ಹೂ ಸೂಸುವ ಗಂಧ , ಹಕ್ಕಿಯ ಜೇನ್ದನಿಯ ಇಂಪು ಎಲ್ಲವೂ ಅವಳಿಗೆ ಕೃಷ್ಣನ ನೆನಪನ್ನು ಹೊತ್ತು ತರುವ ಸಂಗಾತಿಗಳು.
ಭಾನುವಾರ ಬೆಳಗ್ಗೆಯಿಂದ ಬಿಟ್ಟೂ ಬಿಡದೇ ಜಿಟಿ ಜಿಟಿ ಹೊಯ್ಯುತ್ತಿರುವ ಮಳೆ ಮಧ್ಯಾಹ್ನವನ್ನೂ ಆವರಿಸಿದ ಹೊತ್ತು, ಮನಸ್ಸೆಲ್ಲ ಬೇಸರವೇ ತುಂಬಿಕೊಂಡು ಕಿಟಕಿಯಿಂದ ಮಳೆ ನೋಡುತ್ತಿರುವಾಗ ಅವಳಿಗೆ ಎಲ್ಲ ನೆನಪಾಗಿ , ಕಣ್ಣಂಚಿನಿಂದ ಹನಿ ಜಾರಿತು. ಮನಸ್ಸಿನಲ್ಲಿ ಕೃಷ್ಣನೇ ಕೃಷ್ಣ ತುಂಬಿಕೊಂಡು ಕಣ್ಣ ಮುಂದೆ ಅವನದೇ , ಅವಳ ಆ ಕೃಷ್ಣನದೇ ರೂಪ ತೇಲಿಬಂತು. ಕಿಟಕಿಯಾಚೆ ಹನಿ ಹನಿಯುತ್ತಿರುವ ಮಳೆ, ಅವಳ ಮನಸಲ್ಲೂ ಅಷ್ಟೆ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ. ಆದರೂ ಅವಳು ಕೃಷ್ಣನ ನೆನಪೇ ಉಸಿರಾಗಿರುವ ಅವನ ಗೆಳತಿ.
ಅವಳಿಗೆ , ಆ ಒಂಭತ್ತರ ಬಾಲೆಗೆ ಕೃಷ್ಣನೆಂದರೆ ಸಾಕು ಕಣ್ಣರಳುವುದು. ಕೃಷ್ಣ ಅವಳ ಆತ್ಮ , ಕೃಷ್ಣ ಅವಳ ನಗು, ಕೃಷ್ಣ ಅವಳ ಖುಷಿ. ಅವಳಿಗೆ ಏಕಾಂತವೆಂದರೆ ಏನೆಂದು ತಿಳಿಯದು , ಏಕೆಂದರೆ ಅವಳ ಏಕಾಂತದಲ್ಲೂ ಕೃಷ್ಣನಿರುವನು ಅವಳ ಜೊತೆಗೆ. ಕೃಷ್ಣ ಅವಳ ಮಾನಸ ಮಿತ್ರ. ಅವಳ ಖುಷಿ, ನಗು, ದುಃಖ , ಅಳು ಎಲ್ಲದರಲ್ಲಿ ಇರುವುದು ಕೃಷ್ಣನೇ. ಖುಷಿಯಾದಾಗ ಕೃಷ್ಣನೊಡನೆ ಮಾತನಾಡುವಳು ತನ್ನೊಳಗೇ. ದುಃಖವಾದಾಗಲೂ ನೆನೆವುದು ಕೃಷ್ಣನನ್ನೇ , ಯಾಕೆ ಹೀಗೆ ಎಂದು ಕೇಳುವಳು ಅವನನ್ನೇ .
ಕೃಷ್ಣನ ಪೂಜಿಸಿ ಹಬ್ಬ ಮಾಡಲು ಅವಳಿಗೆ ಕೃಷ್ಣಾಷ್ಟಮಿಯೇ ಆಗಬೇಕಿಲ್ಲ . ಅವಳಿಗೆ ಅನ್ನಿಸಿದಾಗಲೆಲ್ಲ ಕೃಷ್ಣನನು ಪೂಜಿಸುವ ಸಂಭ್ರಮ . ಅವಳ ಆ ಕೃಷ್ಣನ ವಿಗ್ರಹಕ್ಕೆ ಸಡಗರದ ಪೂಜೆ. ವಿಗ್ರಹ ! ಅದೆಂಥ ದಿವ್ಯ ಕಳೆಯಿರುವ ಕೃಷ್ಣನ ವಿಗ್ರಹ. ಅವಳು ಐದರ ಬಾಲೆಯಾಗಿದ್ದಾಗ ಅಜ್ಜ ತಂದುಕೊಟ್ಟಿದ್ದು. ಆಗಿನಿಂದ ಅವಳಿಗೆ ಆ ವಿಗ್ರಹದ ಮೇಲೆ ಅದೇನೋ ಮೋಹ. ಅವಳಿಗೆ ಅದು ಬರಿಯ ವಿಗ್ರಹವಲ್ಲ . ಅದು ಕೃಷ್ಣನೆಂದೇ ಅವಳ ನಂಬಿಕೆ . ಆ ವಿಗ್ರಹ ಜೊತೆಯಿದ್ದರೆ ಕೃಷ್ಣನೇ ಜೊತೆಯಿರುವನೆಂಬ ಭಾವ.ಮಕ್ಕೆಳೆಲ್ಲ ಅದರೊಟ್ಟಿಗೆ ಆಡುವಾಗ ತನಗೆ ಅದರ ಮೇಲೆ ಜಾಸ್ತಿ ಅಧಿಕಾರವಿದೆ ಎಂದು ತನ್ನಷ್ಟಕ್ಕೆ ತಾನು ಅಂದುಕೊಳ್ಳುವಳು.
ಶಾಲೆಗೆ ರಜೆ ಬಂದರೆ ಸಾಕು ಪುಟ್ಟ ಮಂಟಪದಲ್ಲಿ ಕೃಷ್ಣನನ್ನಿಟ್ಟು , ಹೂವು ಮಾಲೆ , ಎಲೆಗಳಿಂದ ಸಿಂಗರಿಸುವಳು. ಎಲ್ಲರೊಟ್ಟಿಗೆ ಹಾಡಿ ಪಾಡಿ ನಲಿಯುವಳು. ಮಕ್ಕಳ ಆಟವಾ ಅದು? ನೋಡುವವರ ಕಣ್ಣಿಗೆ ಹಬ್ಬ!
ಅವಳ ಮುಗ್ಧ ಮನಸಿನಲ್ಲಿ ಕೃಷ್ಣನದೊಂದು ಪುಟ್ಟ ಲೋಕ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ , ಕೃಷ್ಣ ತನ್ನ ಆಪ್ತಗೆಳೆಯನೆಂದೇ ಕನಸಲ್ಲೂ ಮನಸಲ್ಲೂ ಕನವರಿಸುವವಳು.
ಅವತ್ತೊಂದು ದಿನ ಬೇಸಿಗೆಯ ಬೆಳಗಿನಲ್ಲಿ ಕೃಷ್ಣನೊಂದಿಗೆ ಆಡಿಕೊಂಡಿದ್ದಳು ಅವಳು. ಬೆಳ್ಬೆಳಿಗ್ಗೆ ಬಂದ ಪುರೋಹಿತರು ಅಜ್ಜನೊಂದಿಗೆ ಏನೋ ಮಾತಾಡುತ್ತಲಿದ್ದರು. ಸಮಯವಾಯಿತೆಂದು ಹೊರಟು ನಿಂತ ಅವರಿಗೆ ಅದೇನೋ ನೆನಪಾಯಿತು. ಮತ್ತೆನಿಂತರು. ಅಲ್ಲೇ ಮುಂದಿನ ಮನೆಯಲ್ಲಿ ಜರುಗುವ ಉಪನಯನ ಕಾರ್ಯಕ್ರಮಕ್ಕೆ ಹೊರಟವರು ಅವರು, ವಟುವಾದ ಹುಡುಗನಿಗೆ ಆಶಿರ್ವಾದಪೂರ್ವಕವಾಗಿ ಏನನ್ನಾದರೂ ಕೊಡುವುದು ಅವರ ವಾಡಿಕೆ . ಈ ಸಾರಿ ಮರೆತು ಬಂದಿದ್ದಾರೆ. "ಏನು ಕೊಡಲಿ ಈಗ ?" ಇವಳ ಅಜ್ಜನನ್ನು ಕೇಳಿದರು. ಅಜ್ಜ ಇನ್ನೂ ಯೋಚನೆಯಲ್ಲಿ ಇರುವಾಗಲೇ ಪುರುಹಿತರ ಕಣ್ಣು ಇವಳು ಆಡಿಕೊಂಡಿದ್ದ ಕೃಷ್ಣನವಿಗ್ರಹದ ಮೇಲೆ ಬಿತ್ತು. "ಈ ವಿಗ್ರಹ ಅವನಿಗೆ ಕೊಡಲು ಲಾಯಕ್ಕಾಗಿದೆ . ಈ ಪುಟ್ಟಿಗೆ ಇನ್ನೊಂದು ದಿನ ಇಂಥದ್ದೇ ತಂದುಕೊಟ್ರೆ ಆಯ್ತು. ಇದನ್ನೇ ಒಯ್ಯುತ್ತೇನೆ . ಆಗಬಹುದೇ? " ಎಂದರು ಅವರು. ಅಜ್ಜನಿಗೋ ಏನು ಹೇಳೋದೆಂದು ತಿಳಿಯದಾಯ್ತು . ಆ ಕೃಷ್ಣನೊಂದಿಗೆ ಅವಳ ನಂಟನ್ನು ಬಲ್ಲವರು ಅವರು. ಅವರು ಏನೋ ಹೇಳುವಷ್ಟರಲ್ಲಿ ಪುರೋಹಿತರು ಅವಳಲ್ಲಿ "ಇಲ್ಲಿ ಕೊಡಮ್ಮಒಮ್ಮೆ ಆ ವಿಗ್ರಹವನ್ನ " ಎನ್ನುತ್ತಾ ಕೈಗೆ ತೆಗೆದುಕೊಂಡರು . "ನಿಂಗೆ ನಿನ್ನ ಅಜ್ಜನ ಕೈಲಿ ಈಥರದ್ದೆ ಇನ್ನೊಂದು ಕೊಡಿಸುವುದಕ್ಕೆ ಹೇಳ್ತೀನಿ . ಈಗ ಇದನ್ನು ನಾನು ಒಯ್ಯುತ್ತೇನೆ ಆಯ್ತಾ " ಅನ್ನುತ್ತಾ ಹೊರಟರು .
ಅವಳ ಹೃದಯಬಡಿತವೇ ನಿಂತಂತಾಯ್ತು . ಅಳು ಒಮ್ಮೆಲೇ ಒತ್ತರಿಸಿಕೊಂಡು ಬಂತು. ಕಣ್ಣುಗಳು ತಂತಾನೇ ಹನಿಗೂಡಿದವು. ನೀರು ತುಂಬಿದ ಕಣ್ಣುಗಳಿಗೆ ಕೊನೆಯಬಾರಿ ಅವಳ ಕೃಷ್ಣ ಅಸ್ಪಷ್ಟವಾಗಿ ಕಂಡನು. " ನನ್ನ ಕೃಷ್ಣ ನನಗೆ ಬೇಕು, ನನಗೆ ಬೇಕು. " ಅವಳು ಅಳುತ್ತ ಓಡಿದಳು. ಆದರೂ ಅವರು ಹೊರಟು ಹೋದರು . ಅವಳ ಅಳು ಅವರಿಗೆ ಕೇಳಿಸಿತಾ ಅಥವಾ ಕೇಳಿಸಲಿಲ್ಲವಾ ? ಅವಳಿಗೆ ಗೊತ್ತಾಗಲಿಲ್ಲ.
ಮತ್ತೊಂದು ಕೃಷ್ಣ ವಿಗ್ರಹವನ್ನು ತಂದುಕೊಡುವೆನೆಂದು ಅಶ್ವಾಸನೆಯಿಡುತ್ತ ಸಮಾಧಾನಿಸಲು ಬಂದ ಅಜ್ಜನ ಮಾತುಗಳು ಅವಳಿಗೆ ರುಚಿಸಲಿಲ್ಲ . ಮನೆಯವರೆಲ್ಲ ಬಂದು ಸಮಾಧಾನ ಮಾಡಿದರೂ ಅವಳ ಅಳು ನಿಲ್ಲಲಿಲ್ಲ . ಅವಳು ಅತ್ತಳು . ಮತ್ತೆ ಮತ್ತೆ ಅತ್ತಳು. ಕೃಷ್ಣ ತನ್ನನ್ನು ಬಿಟ್ಟು ಹೋಗಿದ್ದು ಯಾಕೆಂದು ತಿಳಿಯದೇ ಕಣ್ಣೀರಿಟ್ಟಳು. ಮತ್ತೆ ಮತ್ತೆ ಅವನನ್ನು ಕೇಳಬೇಕು ಅನ್ನಿಸಿತು ದೂರ ಹೋಗಿದ್ದು ಯಾಕೆ ಎಂದು. ಆದರೆ ಹೇಗೆ ಕೇಳುವುದು ದೂರ ಹೋದ ಅವನನ್ನು.
ಕೃಷ್ಣ ಅಮೂರ್ತ ರೂಪ . ಅವನ ಮೂರ್ತಿಯಲ್ಲೇನಿದೆ ? ಕೃಷ್ಣನೆಂಬ ಭಾವ ಆತ್ಮದಲ್ಲಿ ಇದ್ದರೆ ಸಾಕು. ಆದರೆ ಆ ಮುಗ್ಧ ಕಂದನಿಗೆ ಮೂರ್ತ ಅಮೂರ್ತಗಳು ಹೇಗೆ ಅರ್ಥವಾಗಬೇಕು . ಆ ಕೃಷ್ಣನ ವಿಗ್ರಹವೇ ಅವಳ ಆತ್ಮ . ಅವಳ ಆತ್ಮವೇ ಅವಳ ಕೃಷ್ಣ. ಆತ್ಮವೇ ದೂರ ಹೋದರೆ?
ಅದಾದ ಮೇಲೆ ಅವಳ ನಿನ್ನೆ ಇಂದು ನಾಳೆಗಳೆಲ್ಲ ಬರೀ ದೂರವಾದ ಕೃಷ್ಣನ ನೆನೆದು ಚಿಂತಿಸುವದರಲ್ಲೇ ಕಳೆಯಿತು . ಎಲ್ಲಿರಬಹುದು ನನ್ನ ಕೃಷ್ಣ. ಅವರ ಮನೆಯಲ್ಲಿ ಹೊರಗೆ ಕಾಣುವಂತೆ ಇಟ್ಟಿರಬಹುದಾ ? ನೋಡುವ ಆಸೆಯಾಯ್ತು ಅವಳಿಗೆ. ಆಟವಾಡುವ ನೆಪದಲ್ಲಿ ಎದುರು ಮನೆಗೆ ಹೋದಾಗ ಅಲ್ಲೆಲ್ಲಾ ಹುಡುಕಿದಳು ಕೃಷ್ಣನನ್ನು. ಕೃಷ್ಣ ಎಲ್ಲೂ ಕಾಣದೇ ಮತ್ತದೇ ನಿರಾಸೆ ಅವಳ ಪಾಲಿಗೆ.
15 ವರ್ಷಗಳಲ್ಲಿ ಅದೆಷ್ಟೋ ಹಗಲುಗಳು ರಾತ್ರಿಗಳು ಕೃಷ್ಣನ ನೆನಪಲ್ಲೇ ಕಳೆದು ಹೋದವು. ಬೀಸುವ ಗಾಳಿ, ತಂಪಿನ ಮಳೆ ಹನಿ , ಹೂ ಸೂಸುವ ಗಂಧ , ಹಕ್ಕಿಯ ಜೇನ್ದನಿಯ ಇಂಪು ಎಲ್ಲವೂ ಅವಳಿಗೆ ಕೃಷ್ಣನ ನೆನಪನ್ನು ಹೊತ್ತು ತರುವ ಸಂಗಾತಿಗಳು.ಭಾನುವಾರ ಬೆಳಗ್ಗೆಯಿಂದ ಬಿಟ್ಟೂ ಬಿಡದೇ ಜಿಟಿ ಜಿಟಿ ಹೊಯ್ಯುತ್ತಿರುವ ಮಳೆ ಮಧ್ಯಾಹ್ನವನ್ನೂ ಆವರಿಸಿದ ಹೊತ್ತು, ಮನಸ್ಸೆಲ್ಲ ಬೇಸರವೇ ತುಂಬಿಕೊಂಡು ಕಿಟಕಿಯಿಂದ ಮಳೆ ನೋಡುತ್ತಿರುವಾಗ ಅವಳಿಗೆ ಎಲ್ಲ ನೆನಪಾಗಿ , ಕಣ್ಣಂಚಿನಿಂದ ಹನಿ ಜಾರಿತು. ಮನಸ್ಸಿನಲ್ಲಿ ಕೃಷ್ಣನೇ ಕೃಷ್ಣ ತುಂಬಿಕೊಂಡು ಕಣ್ಣ ಮುಂದೆ ಅವನದೇ , ಅವಳ ಆ ಕೃಷ್ಣನದೇ ರೂಪ ತೇಲಿಬಂತು. ಕಿಟಕಿಯಾಚೆ ಹನಿ ಹನಿಯುತ್ತಿರುವ ಮಳೆ, ಅವಳ ಮನಸಲ್ಲೂ ಅಷ್ಟೆ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ. ಆದರೂ ಅವಳು ಕೃಷ್ಣನ ನೆನಪೇ ಉಸಿರಾಗಿರುವ ಅವನ ಗೆಳತಿ.
Categories: ಕನ್ನಡ ಪುಟಗಳು
ಮೌನದ ಗೆಳತಿ
ಈಗೀಗ ನನ್ನ ಹೆಜ್ಜೆಗಳಿಗೆ ಸದ್ದಿಲ್ಲ
ಘಲು ಘಲು ಎನ್ನುತ್ತಿದ್ದ
ಗೆಜ್ಜೆಗಳಿಗೂ ಯಾಕೋ ಮೌನದ ಮುಸುಕು.
ಕಿಂಕಿಣಿಸುತ್ತಿದ್ದ ಬಳೆಗಳದು
ಮಾತಿಲ್ಲವೀಗ,
ಕಂಗಳೊಳಗೆ ಕನಸುಗಳ ನಗೆಯ
ಕಿಲಕಿಲವಿಲ್ಲದೇ ಬರೀ ನಿಶ್ಶಬ್ದ.
ಮನದ ಕಡಲದು
ಪಿಸುಮಾತಿನ ಭಾವದಲೆಗಳ
ಭೋರ್ಗರೆತವಿಲ್ಲದೆ ಪ್ರಶಾಂತ.
ಮಾನಸದೊಳು ಭಾವವಾಗಿ
ಕಣ್ಣಂಚಿನ ಮಿಂಚಾಗಿ
ತುಟಿಯಂಚಿನಲಿ ನಗೆಯಾಗುತ್ತಿದ್ದ
ಕವಿತೆಗಳಿಗೀಗ ಧ್ಯಾನಸ್ಥ ಮೌನ.
ನಾನೀಗ ಮೌನದ ಗೆಳತಿ.
ಘಲು ಘಲು ಎನ್ನುತ್ತಿದ್ದ
ಗೆಜ್ಜೆಗಳಿಗೂ ಯಾಕೋ ಮೌನದ ಮುಸುಕು.
ಕಿಂಕಿಣಿಸುತ್ತಿದ್ದ ಬಳೆಗಳದು
ಮಾತಿಲ್ಲವೀಗ,
ಕಂಗಳೊಳಗೆ ಕನಸುಗಳ ನಗೆಯ
ಕಿಲಕಿಲವಿಲ್ಲದೇ ಬರೀ ನಿಶ್ಶಬ್ದ.
ಮನದ ಕಡಲದು
ಪಿಸುಮಾತಿನ ಭಾವದಲೆಗಳ
ಭೋರ್ಗರೆತವಿಲ್ಲದೆ ಪ್ರಶಾಂತ.
ಮಾನಸದೊಳು ಭಾವವಾಗಿ
ಕಣ್ಣಂಚಿನ ಮಿಂಚಾಗಿ
ತುಟಿಯಂಚಿನಲಿ ನಗೆಯಾಗುತ್ತಿದ್ದ
ಕವಿತೆಗಳಿಗೀಗ ಧ್ಯಾನಸ್ಥ ಮೌನ.
ನಾನೀಗ ಮೌನದ ಗೆಳತಿ.
Categories: ಕನ್ನಡ ಪುಟಗಳು
ಹೀಗೇ ಒಂದಿಷ್ಟು ಮಾತುಕತೆ
ಅವತ್ತೊಂದು ದಿನ ಹೀಗೇ ಏನೋ ಓದುತ್ತ ಕುಳಿತಿದ್ದೆ. ದೀಕ್ಷಾ ಪುಟಾಣಿ ಅಲ್ಲೇ ಆಡುತ್ತ ಏನೋ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಹೊರಗಡೆ ಏನೋ ಸದ್ದಾಯ್ತು. ಗುಂಯ್ ಗುಂಯ್ ಎಂದು ಸದ್ದು ಇನ್ನೂ ಜೋರಾಯಿತು. ಹೊರಗೆ ಸಮೀಪದಲ್ಲಿ ವಿಮಾನವೊಂದು ಹಾರುತ್ತಿತು ಅದರದ್ದೇ ಆ ಗಲಾಟೆ. ನನ್ನ ಯಾವತ್ತಿನ ಅಭ್ಯಾಸದಂತೆ "ಹೇಯ್ ಬಾರೆ ದೀಕ್ಷಾ ಹೊರಗೆ ನೋಡು ಏನೋ ಶಬ್ದ. ಏನೋ ತೋರ್ಸ್ತಿ ಬಾ " ನಾನು ಕೂಗಿದೆ. ಅವಳಿಗೆ ವಿಮಾನ ತೋರಿಸಬೇಕು ಅಂತ ನಾನು ಬಹಳ ಉತ್ಸಾಹದಲ್ಲಿದ್ದೆ. ಆದರೆ ನನ್ನಆಶ್ಚರ್ಯಕ್ಕೆ ಅವಳು ಯಾವುದೇ ಉತ್ಸಾಹ ತೋರದೆ ಬಹಳ ಉದಾಸೀನ ಭಾವದಲ್ಲಿ "ಏ ಅದು ಬೇರೆ ಏನೂ ಅಲ್ಲ. ವಿಮಾನಹೋಗ್ತಾ ಇದೆ ಅದರದ್ದೇ ಶಬ್ದ ಅಷ್ಟೆ." ಅಂದಳು ನನಗೆ ಅಷ್ಟೂ ಗೊತ್ತಿಲ್ಲ ಎಂಬಂತೆ.
ಅಷ್ಟು ಪುಟಾಣಿ ಹುಡುಗಿಯ ಕೈಯಲ್ಲಿ ನಂಗೆ ಮಂಗಳಾರತಿ ಆಗಿತ್ತು. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿಯಂತೆ ಆರಿ ಹೋಗಿತ್ತು. ಈಗಿನ ಮಕ್ಕಳನ್ನು ನಮ್ಮ ಬಾಲ್ಯ ಕಾಲದ ಮಕ್ಕಳಂತೆ ಹೋಲಿಸಿಕೊಂಡು ನಾನು ಅವಳನ್ನು ಕೂಗಿದ್ದು ನನ್ನ ತಪ್ಪೇ ಆಗಿತ್ತು.
ಈಗಿನ ಮಕ್ಕಳಿಗೆ ಆಶ್ಚರ್ಯ ಎನ್ನುವುದು ಯಾವುದೂ ಉಳಿದಿಲ್ಲ ಅಂತ ನನ್ನ ಭಾವನೆ. ಉದಾಹರಣೆಗೆ ಈ ವಿಮಾನವೇ. ನಾವೆಲ್ಲ ಚಿಕ್ಕವರಾಗಿದ್ದಾಗ ಆಕಾಶದಲ್ಲಿ ಒಂಚೂರು ಶಬ್ದವಾದರೂ ಸಾಕು ಆ ಪಿಳ್ಳೆಯಂತೆ ಕಾಣುತ್ತಿದ್ದ ವಿಮಾನವನ್ನು ನೋಡಲು ಎಲ್ಲಿದ್ದರೂ ಓಡಿ ಹೊರಗೆ ಬಂದು ಮೇಲೆ ನೋಡುತ್ತಿದ್ದೆವು. ಎಲ್ಲಾದರೂ ನಮಗೆ ಅದು ಕಾಣದೇ ಬೇರೆಯವರಿಗೆ ಮಾತ್ರ ಕಂಡುಬಿಟ್ಟಿದ್ದರೆ ಬೇಜಾರಾಗುತ್ತಿತ್ತು. ಈಗಿನ ಮಕ್ಕಳು ವಿಮಾನವನ್ನು ಆಕಾಶದಲ್ಲಿ ನೋಡುವುದೇನು ಎಷ್ಟೋ ಸಲ ವಿಮಾನದಲ್ಲಿ ಕೂತು ಹಾರಾಡಿಯೂ ಇರುತ್ತಾರೆ. ಬೆಂಗಳೂರಿನಂತ ಊರಲ್ಲಿ ದಿನಾ ಬೆಳಗಾದರೆ ಆಕಾಶದಲ್ಲಿ ಎಷ್ಟೋ ವಿಮಾನ ಹಾರುತ್ತಿರುವುದು ಬೇಡಅಂದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದಕ್ಕೇ ಅವರಿಗೆ ನಮ್ಮಂತೆ ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ.
ಈಗಿನ ಮಕ್ಕಳಿಗೆ ಇಂಥದ್ದು ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ. ಅದೇ ಕಾರಣಕ್ಕೆ ಆ ಮಕ್ಕಳಿಗೆ ನಮ್ಮಂತೆ ನಾನು ದೊಡ್ಡವಳಾದ ಮೇಲೆ ದುಡಿಯುವಂತವಳಾದ ಮೇಲೆ ಇಂಥದ್ದನ್ನು ನಾನೇ ತಗೋಬೇಕು" ಅನ್ನುವ ಆಸೆ, ಭಾವನೆಬರುವುದೇ ಇಲ್ಲವೇನೋ ಬಹುಷಃ .
ಇದು ಒಂದು ಉದಾಹರಣೆಯಷ್ಟೇ. ಎಲ್ಲವೂ ಕೈಗೆಟುಕುವುದರಿಂದ ಇನ್ನೂ ಎಷ್ಟೋ ವಿಷಯಗಳಲ್ಲಿ ಮಕ್ಕಳಿಗೆ ಕುತೂಹಲವೆ ಉಳಿದಿಲ್ಲ. ಈ ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ! ವಯಸ್ಸಿಗೆ ಮೀರಿ ಎಲ್ಲವೂ ಈಗಿನ ಮಕ್ಕಳಿಗೆ ಗೊತ್ತಿರುತ್ತದೆ. ನಮ್ಮಂತೆ ಆಕಾಶ ನೋಡಿ ಚಂದ್ರ ನಕ್ಷತ್ರಗಳನ್ನು ನೋಡಿ ಆನಂದಿಸೋ ಮನಸ್ಥಿತಿ ಯಾರಿಗೂ ಇಲ್ಲ. ಅದರಲ್ಲೇನಿದೆ ಅನ್ನುವ ನಿರ್ಭಾವುಕ ಮನೋಭಾವ. ನೀತಿ ಕಥೆಗಳು, ಪದ್ಯಗಳು ಯಾರಿಗೆ ಬೇಕಾಗಿದೆ ಈಗ ? ಅವು ಏನೆಂದೇ ಗೊತ್ತಿಲ್ಲ. ನಮ್ಮ ಕಾಲದ ಕಾಗಕ್ಕ ಗುಬ್ಬಕ್ಕಗಳೆಲ್ಲ ಎಲ್ಲಿಗೋ ಹಾರಿ ಹೋಗಿ ಬಹಳ ವರ್ಷಗಳಾಗಿಬಿಟ್ಟಿದೆ. ಹೀಗೆಲ್ಲ ಯೋಚಿಸಿದಾಗ ಬೇಜಾರಾಗುತ್ತದೆ
ನನಗೆ.
ದಿನಾ ಸಂಜೆ ಟೆರೆಸ್ ಮೇಲೆ ಸುಮ್ಮನೇ ಗಾಳಿಗೆ ಮೈಯೊಡ್ಡಿ ನಿಂತು ಲಹರಿಯಲ್ಲಿ ಯೋಚಿಸುತ್ತಿರುವಾಗ ದೀಕ್ಷಾ ಪುಟ್ಟಿ ಬಂದರೆ ಅವಳಿಗೆ ಆಕಾಶ ನಕ್ಷತ್ರ ಚಂದ್ರ ಎಲ್ಲ ತೋರಿಸಿ ಕಥೆ ಹೇಳ್ತಿದ್ದೆ. ಮೊದ ಮೊದಲು ಉತ್ಸಾಹ ತೋರಿಸದೇ ಕೀಟಲೆ ಮಾಡುತ್ತಿದ್ದವಳು ಆಮೇಲೆ ತುಂಬ ಕುತೂಹಲದಿಂದ ಕೇಳುತ್ತಿದ್ದಳು. ನಡು ನಡುವೆ ಮುದ್ದು ಬರುವಂತೆ ಮುಗ್ಧ ಪ್ರಶ್ನೆಗಳು. ಹಾಗೆಯೇ ಒಂದು ದಿನ ಆಕಾಶದತ್ತ ಮುಖ ಮಾಡಿದವಳೇ "ಹಾ . ನಿಮ್ಮನೆ ಚಂದ್ರ ಎಷ್ಟು ದೊಡ್ದಕ್ಕಿದ್ನೆ ! ನಮ್ಮನೆ ಚಂದ್ರ ಸಣ್ಣಕಿದ್ದ ! ಎಂತಕ್ಕೇನಾ !" ಅಂದಳು. ನಂಗೆ ನಗು ಮತ್ತು ಅವಳ ಮೇಲೆ ಮುದ್ದು ಎರಡೂ ಉಕ್ಕಿ ಬಂತು. ನನಗೆ ಮಕ್ಕಳು ಇಂಥ ಕುತೂಹಲಿ ಮತ್ತು ಮುಗ್ಧಭಾವದವರಾಗಿದ್ದಾಗಲೇ ಇಷ್ಟವಾಗೋದು. ಅವಳ ಪ್ರಶ್ನೆಗೆ ಅವಳಂತೆಯೇ ಮುಗ್ಧವಾದ ಉತ್ತರವನ್ನಿತ್ತು , ಅದಕ್ಕೆ ಅವಳು ಕೇಳಿದಇನ್ನಷ್ಟು ಮುಗ್ಧ ಪ್ರಶ್ನೆಗಳಿಗೆ ಮತ್ತೆ ಉತ್ತರ ಹುಡುಕುತ್ತ , ಅವಳು ಹೇಳಿದ ಚಂದಕ್ಕಿಮಾಮ - ಚಕ್ಕುಲಿಮಾಮನ ಕಥೆಯನ್ನು ಮನದಣಿಯೆ ಆನಂದಿಸಿದೆ.
ಮೊನ್ನೆ ಯಾಕೋ ವಿಮಾನದ ಕಥೆ ಮತ್ತು ಚಂದಕ್ಕಿಮಾಮ - ಚಕ್ಕುಲಿಮಾಮಾನ ಕಥೆ ಬಹಳ ನೆನಪಾಗುತ್ತಿತ್ತು, ನೆನಪು ಇಲ್ಲಿ ಅಕ್ಷರವಾಯ್ತು.
ಅಷ್ಟು ಪುಟಾಣಿ ಹುಡುಗಿಯ ಕೈಯಲ್ಲಿ ನಂಗೆ ಮಂಗಳಾರತಿ ಆಗಿತ್ತು. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿಯಂತೆ ಆರಿ ಹೋಗಿತ್ತು. ಈಗಿನ ಮಕ್ಕಳನ್ನು ನಮ್ಮ ಬಾಲ್ಯ ಕಾಲದ ಮಕ್ಕಳಂತೆ ಹೋಲಿಸಿಕೊಂಡು ನಾನು ಅವಳನ್ನು ಕೂಗಿದ್ದು ನನ್ನ ತಪ್ಪೇ ಆಗಿತ್ತು.
ಈಗಿನ ಮಕ್ಕಳಿಗೆ ಆಶ್ಚರ್ಯ ಎನ್ನುವುದು ಯಾವುದೂ ಉಳಿದಿಲ್ಲ ಅಂತ ನನ್ನ ಭಾವನೆ. ಉದಾಹರಣೆಗೆ ಈ ವಿಮಾನವೇ. ನಾವೆಲ್ಲ ಚಿಕ್ಕವರಾಗಿದ್ದಾಗ ಆಕಾಶದಲ್ಲಿ ಒಂಚೂರು ಶಬ್ದವಾದರೂ ಸಾಕು ಆ ಪಿಳ್ಳೆಯಂತೆ ಕಾಣುತ್ತಿದ್ದ ವಿಮಾನವನ್ನು ನೋಡಲು ಎಲ್ಲಿದ್ದರೂ ಓಡಿ ಹೊರಗೆ ಬಂದು ಮೇಲೆ ನೋಡುತ್ತಿದ್ದೆವು. ಎಲ್ಲಾದರೂ ನಮಗೆ ಅದು ಕಾಣದೇ ಬೇರೆಯವರಿಗೆ ಮಾತ್ರ ಕಂಡುಬಿಟ್ಟಿದ್ದರೆ ಬೇಜಾರಾಗುತ್ತಿತ್ತು. ಈಗಿನ ಮಕ್ಕಳು ವಿಮಾನವನ್ನು ಆಕಾಶದಲ್ಲಿ ನೋಡುವುದೇನು ಎಷ್ಟೋ ಸಲ ವಿಮಾನದಲ್ಲಿ ಕೂತು ಹಾರಾಡಿಯೂ ಇರುತ್ತಾರೆ. ಬೆಂಗಳೂರಿನಂತ ಊರಲ್ಲಿ ದಿನಾ ಬೆಳಗಾದರೆ ಆಕಾಶದಲ್ಲಿ ಎಷ್ಟೋ ವಿಮಾನ ಹಾರುತ್ತಿರುವುದು ಬೇಡಅಂದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದಕ್ಕೇ ಅವರಿಗೆ ನಮ್ಮಂತೆ ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ.
ಈಗಿನ ಮಕ್ಕಳಿಗೆ ಇಂಥದ್ದು ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ. ಅದೇ ಕಾರಣಕ್ಕೆ ಆ ಮಕ್ಕಳಿಗೆ ನಮ್ಮಂತೆ ನಾನು ದೊಡ್ಡವಳಾದ ಮೇಲೆ ದುಡಿಯುವಂತವಳಾದ ಮೇಲೆ ಇಂಥದ್ದನ್ನು ನಾನೇ ತಗೋಬೇಕು" ಅನ್ನುವ ಆಸೆ, ಭಾವನೆಬರುವುದೇ ಇಲ್ಲವೇನೋ ಬಹುಷಃ .
ಇದು ಒಂದು ಉದಾಹರಣೆಯಷ್ಟೇ. ಎಲ್ಲವೂ ಕೈಗೆಟುಕುವುದರಿಂದ ಇನ್ನೂ ಎಷ್ಟೋ ವಿಷಯಗಳಲ್ಲಿ ಮಕ್ಕಳಿಗೆ ಕುತೂಹಲವೆ ಉಳಿದಿಲ್ಲ. ಈ ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ! ವಯಸ್ಸಿಗೆ ಮೀರಿ ಎಲ್ಲವೂ ಈಗಿನ ಮಕ್ಕಳಿಗೆ ಗೊತ್ತಿರುತ್ತದೆ. ನಮ್ಮಂತೆ ಆಕಾಶ ನೋಡಿ ಚಂದ್ರ ನಕ್ಷತ್ರಗಳನ್ನು ನೋಡಿ ಆನಂದಿಸೋ ಮನಸ್ಥಿತಿ ಯಾರಿಗೂ ಇಲ್ಲ. ಅದರಲ್ಲೇನಿದೆ ಅನ್ನುವ ನಿರ್ಭಾವುಕ ಮನೋಭಾವ. ನೀತಿ ಕಥೆಗಳು, ಪದ್ಯಗಳು ಯಾರಿಗೆ ಬೇಕಾಗಿದೆ ಈಗ ? ಅವು ಏನೆಂದೇ ಗೊತ್ತಿಲ್ಲ. ನಮ್ಮ ಕಾಲದ ಕಾಗಕ್ಕ ಗುಬ್ಬಕ್ಕಗಳೆಲ್ಲ ಎಲ್ಲಿಗೋ ಹಾರಿ ಹೋಗಿ ಬಹಳ ವರ್ಷಗಳಾಗಿಬಿಟ್ಟಿದೆ. ಹೀಗೆಲ್ಲ ಯೋಚಿಸಿದಾಗ ಬೇಜಾರಾಗುತ್ತದೆ
ನನಗೆ.
ದಿನಾ ಸಂಜೆ ಟೆರೆಸ್ ಮೇಲೆ ಸುಮ್ಮನೇ ಗಾಳಿಗೆ ಮೈಯೊಡ್ಡಿ ನಿಂತು ಲಹರಿಯಲ್ಲಿ ಯೋಚಿಸುತ್ತಿರುವಾಗ ದೀಕ್ಷಾ ಪುಟ್ಟಿ ಬಂದರೆ ಅವಳಿಗೆ ಆಕಾಶ ನಕ್ಷತ್ರ ಚಂದ್ರ ಎಲ್ಲ ತೋರಿಸಿ ಕಥೆ ಹೇಳ್ತಿದ್ದೆ. ಮೊದ ಮೊದಲು ಉತ್ಸಾಹ ತೋರಿಸದೇ ಕೀಟಲೆ ಮಾಡುತ್ತಿದ್ದವಳು ಆಮೇಲೆ ತುಂಬ ಕುತೂಹಲದಿಂದ ಕೇಳುತ್ತಿದ್ದಳು. ನಡು ನಡುವೆ ಮುದ್ದು ಬರುವಂತೆ ಮುಗ್ಧ ಪ್ರಶ್ನೆಗಳು. ಹಾಗೆಯೇ ಒಂದು ದಿನ ಆಕಾಶದತ್ತ ಮುಖ ಮಾಡಿದವಳೇ "ಹಾ . ನಿಮ್ಮನೆ ಚಂದ್ರ ಎಷ್ಟು ದೊಡ್ದಕ್ಕಿದ್ನೆ ! ನಮ್ಮನೆ ಚಂದ್ರ ಸಣ್ಣಕಿದ್ದ ! ಎಂತಕ್ಕೇನಾ !" ಅಂದಳು. ನಂಗೆ ನಗು ಮತ್ತು ಅವಳ ಮೇಲೆ ಮುದ್ದು ಎರಡೂ ಉಕ್ಕಿ ಬಂತು. ನನಗೆ ಮಕ್ಕಳು ಇಂಥ ಕುತೂಹಲಿ ಮತ್ತು ಮುಗ್ಧಭಾವದವರಾಗಿದ್ದಾಗಲೇ ಇಷ್ಟವಾಗೋದು. ಅವಳ ಪ್ರಶ್ನೆಗೆ ಅವಳಂತೆಯೇ ಮುಗ್ಧವಾದ ಉತ್ತರವನ್ನಿತ್ತು , ಅದಕ್ಕೆ ಅವಳು ಕೇಳಿದಇನ್ನಷ್ಟು ಮುಗ್ಧ ಪ್ರಶ್ನೆಗಳಿಗೆ ಮತ್ತೆ ಉತ್ತರ ಹುಡುಕುತ್ತ , ಅವಳು ಹೇಳಿದ ಚಂದಕ್ಕಿಮಾಮ - ಚಕ್ಕುಲಿಮಾಮನ ಕಥೆಯನ್ನು ಮನದಣಿಯೆ ಆನಂದಿಸಿದೆ.
ಮೊನ್ನೆ ಯಾಕೋ ವಿಮಾನದ ಕಥೆ ಮತ್ತು ಚಂದಕ್ಕಿಮಾಮ - ಚಕ್ಕುಲಿಮಾಮಾನ ಕಥೆ ಬಹಳ ನೆನಪಾಗುತ್ತಿತ್ತು, ನೆನಪು ಇಲ್ಲಿ ಅಕ್ಷರವಾಯ್ತು.
Categories: ಕನ್ನಡ ಪುಟಗಳು
ಸೋರಿ ಹೋಗುತಿದೆ ಬೆಳದಿಂಗಳು
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಬೆಳ್ಳಿ ಬೆಳಕ ಕಣ್ತುಂಬಿಕೊಂಡು
ಮನದಣಿಯೆ ಅಂಗಳದಲ್ಲಿ ನಲಿಯುವವರಿಲ್ಲದೇ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಅವಳ ಕಂಗಳೊಳಗೆ ಬೆಳದಿಂಗಳಿಳಿಯುವಾಗ
ಅವನು ಅವಳ ಕಣ್ಣಲ್ಲಿ ಕಣ್ಣಿಡಲು ,
ಅವಳ ಕೆನ್ನೆ ಕೆಂಪಾಗಿ ಅವನು ನಗುವುದಕೆ
ಅವನಿಲ್ಲ ಅವಳಿಲ್ಲ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಅಳುವ ಕಂದನಿಗೊಮ್ಮೆ
ನಗುವ ಚಂದಕ್ಕಿ ಮಾಮನನು ತೋರಿಸಿ
ಹಾಲು ಬೆಳದಿಂಗಳಲಿ ತೋಯ್ದ ತುತ್ತನುಣಿಸಿ
ಚಂದ್ರನೂರಿಗೆ ಕಳುಹುವೆನೆಂದು ಲಾಲಿ ಹಾಡಿ
ಮುದ್ದಿಸಲು ಯಾರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಶ್ರಾವಣದ ಇರುಳಿನಲಿ
ಕಪ್ಪಿಟ್ಟ ಕಾರ್ಮೋಡ ಕರಗಿ ಮಳೆ ಹನಿಯುವಾಗ
ಮರದ ಮರೆಯಲ್ಲಿಣುಕಿ
ಬೆಳದಿಂಗಳ ನಗೆ ಚೆಲ್ಲುವ ಚಂದಿರನ
ತುಂಬುಮೊಗವ ನೋಡುವವರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಸುಮ್ಮನೇ ಅಂಗಳದಲ್ಲಿ.
ಬೆಳ್ಳಿ ಬೆಳಕ ಕಣ್ತುಂಬಿಕೊಂಡು
ಮನದಣಿಯೆ ಅಂಗಳದಲ್ಲಿ ನಲಿಯುವವರಿಲ್ಲದೇ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಅವಳ ಕಂಗಳೊಳಗೆ ಬೆಳದಿಂಗಳಿಳಿಯುವಾಗ
ಅವನು ಅವಳ ಕಣ್ಣಲ್ಲಿ ಕಣ್ಣಿಡಲು ,
ಅವಳ ಕೆನ್ನೆ ಕೆಂಪಾಗಿ ಅವನು ನಗುವುದಕೆ
ಅವನಿಲ್ಲ ಅವಳಿಲ್ಲ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಅಳುವ ಕಂದನಿಗೊಮ್ಮೆ
ನಗುವ ಚಂದಕ್ಕಿ ಮಾಮನನು ತೋರಿಸಿ
ಹಾಲು ಬೆಳದಿಂಗಳಲಿ ತೋಯ್ದ ತುತ್ತನುಣಿಸಿ
ಚಂದ್ರನೂರಿಗೆ ಕಳುಹುವೆನೆಂದು ಲಾಲಿ ಹಾಡಿ
ಮುದ್ದಿಸಲು ಯಾರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಶ್ರಾವಣದ ಇರುಳಿನಲಿ
ಕಪ್ಪಿಟ್ಟ ಕಾರ್ಮೋಡ ಕರಗಿ ಮಳೆ ಹನಿಯುವಾಗ
ಮರದ ಮರೆಯಲ್ಲಿಣುಕಿ
ಬೆಳದಿಂಗಳ ನಗೆ ಚೆಲ್ಲುವ ಚಂದಿರನ
ತುಂಬುಮೊಗವ ನೋಡುವವರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
Categories: ಕನ್ನಡ ಪುಟಗಳು
