ಅವಧಿ
‘ಸಿರಿ’ ಬಂದ ಕಾಲಕ್ಕೆ…
ಈಕೆ ಸಿರಿ ಅರ್ಥಾತ್ ‘ಮೃಗನಯನಿ’.
ತನ್ನ ಕಣ್ಣುಗಳಿಂದ ಕಂಡ ಲೋಕವನ್ನು ಅವಧಿಯಲ್ಲಿ ಬಿಚ್ಚಿಡಲಿದ್ದಾರೆ.
ಹೊಸ ಅಂಕಣ - ಸಿರಿ ಬಂದ ಕಾಲಕ್ಕೆ…
ನಿರೀಕ್ಷಿಸಿ..
Categories: ಕನ್ನಡ ಪುಟಗಳು
ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…
ತುಟಿಯ ರಂಗು ಕಳೆದಿದೆ.
ಇಲಾಸ್ಟಿಕ್ ಸ್ಮೈಲೂ…
ಇನ್ನು ಮುಂದೆ ಮುಖವಾಡದ ಅಗತ್ಯವಿಲ್ಲ.
ಕಣ್ ಬಿಟ್ಟಾಗಿನಿಂದ ಕಂಡಿದ್ದು ಗುಬ್ಬಚ್ಚಿ ಗೂಡಂಥ ಬೆಚ್ಚನೆ ಸಂಸಾರ. ಅಲ್ಲಿ ಕುಂತು ಹೆಣೆದ ಕನಸುಗಳೂ ಬೆಚ್ಚಬೆಚ್ಚನೆಯವೇ.
ಇದ್ದಕ್ಕಿದ್ದ ಹಾಗೇ ಒಮ್ಮೆ, ಬೆಂಕಿ ಬಿತ್ತು ನಿದ್ದೆಗೆ! ಅದರ ಸುತ್ತ ಅವನ ಶಲ್ಯದ ತುದಿಗೆ ಸೆರಗು ಕಟ್ಟಿಕೊಂಡ ನಾನು, ತಲೆ ತಗ್ಗಿಸಿ ಪ್ರದಕ್ಷಿಣೆ ಬಂದೆ. ಕನಸುಗಳೆಲ್ಲ ಬೆಂಕಿಯೊಳಗೆ ಸುರಿದುಬಿದ್ದವು.
ಹಾಗಂತ ಗೊತ್ತಾಗುವ ಹೊತ್ತಿಗೆ ಸುತ್ತಮುತ್ತ ಹೊಗೆ ತುಂಬಿ ದಮ್ಮುಕಟ್ಟಿತ್ತು. ಒಂದೇ ಸಮ ಉರಿ.
ಕಣ್ಣಲ್ಲೂ, ಎದೆಯಲ್ಲೂ.
ಸತ್ತಿದ್ದು ಸಾಕು ಅನಿಸಿತು. ಬದುಕಲಿಕ್ಕೆ ಹೊಸ ಗಾಳಿ ಬೇಕಲ್ಲ? ಬಾಗಿಲು [...]
Categories: ಕನ್ನಡ ಪುಟಗಳು
ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ
-ವಿಕ್ರಮ್ ಹತ್ವಾರ್
ಗಂಡ ಮತ್ತು ಮಗಳ ಆರೈಕೆಯಲ್ಲೆ ಅರ್ಧ ಆಯಸ್ಸು ಸವೆದ ಹೆಂಗಸು ಅವಳು. ಮಗಳ ಮದುವೆ ನಿಶ್ಚಯವಾಗಿದೆ. ಅದೊಂದು ದಿನ ಮಗಳು ತಾಯಿಯನ್ನು ಎದುರು ಕೂರಿಸಿಕೊಂಡು, ‘ನನ್ನನ್ನು ನಿನ್ನದೇ ಪ್ರತಿರೂಪ ಅನ್ನುತ್ತಾರೆ ಎಲ್ಲ, ಎಲ್ಲಿ ನೋಡುವ…’ ಎಂದು ತನ್ನ ಮದುವೆಯ ದುಪಟ್ಟವನ್ನು (ಗೂಂಘಟ್) ತಾಯಿಯ ತಲೆಯ ಮೇಲೆ ಹೊದಿಸಿ, ತನ್ನ ಹೊಸ ಕೆಂಪು ಬಳೆಗಳಲ್ಲಿ ನಾಲ್ಕಾರನ್ನು ಅವಳಿಗೆ ತೊಡಿಸಿ ತಾಯಿಯನ್ನು ಕಣ್ತುಂಬ ನೋಡುತ್ತಾಳೆ. ಇವತ್ತೊಂದು ದಿನ ಇದನ್ನ ತೆಗೆಯಬೇಡ, ಇರಲಿ……ಅದ್ಯಾಕೆ ನೀನು ಬಣ್ಣಬಣ್ಣದ ಬಟ್ಟೆ ಹಾಕುವುದಿಲ್ಲ? ಎಷ್ಟು [...]
Categories: ಕನ್ನಡ ಪುಟಗಳು
ಮಿನಿ ಮಿನಿ ಯಾ ಮಿಣಿ ಮಿಣಿ
Categories: ಕನ್ನಡ ಪುಟಗಳು
ಕಾಗದ ಬಂದಿದೆ…
ನವೋಮಿ ಅವರ ‘ನನ್ನೊಳಗಿನ ನವೋಮಿ ಈಗಲೂ ನನ್ನನ್ನು ಹಂಗಿಸುತ್ತಾಳೆ’ ಲೇಖನಕ್ಕೆ ಪ್ರತಿಕ್ರಿಯೆ -
ಚಂದಿನ
http://www.koogu.blogspot.com | chandinais@gmail.com |
ಇದು ಖಂಡಿತ ಕೂಲ್ ಟಾಕ್ ಅಲ್ಲ ,
ನಿಜವೆಂದು ನಂಬಲು ಕಷ್ಟವೆ.
ನಿಜವಾಗಿದ್ದರೆ ಖಂಡಿತ ಸಹಾಯ ಮಾಡ್ತಿದ್ರಿ.
-ಚಂದಿನ
+++
Radhika
mgradhikaa@yahoo.com |
Wonder what prevented you from putting a word to the minister when you had the privilege [...]
Categories: ಕನ್ನಡ ಪುಟಗಳು
ನನ್ನೊಳಗಿನ ನವೋಮಿ ಈಗಲೂ ನನ್ನನ್ನು ಹಂಗಿಸುತ್ತಾಳೆ
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
ವಿಧಾನ ಸೌಧ ಸುತ್ತ ಮುತ್ತ ಅವಳನ್ನು ಹಲವಾರು ಬಾರಿ ನೋಡಿದ್ದೆ. ಉದ್ದೋ ಉದ್ದಕ್ಕಿದ್ದ ಮಗನನ್ನು ಕಂಕುಳಲ್ಲಿ ಹೊತ್ತು ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಸಾಗುವ ಅವಳನ್ನು ಕಂಡಾಗಲೆಲ್ಲಾ ನನ್ನ ಕರುಳು ಚುರುಕ್ ಎನಿಸುತ್ತಿತ್ತು. ಅವಳ ಮಗನಿಗೆ ಸಿರೆಬ್ರಲ್ ಪಾಲ್ಸಿ. ಸುಮಾರು 13 ವರ್ಷ ಆಗಿತ್ತೇನೋ. ಆ ಹುಡುಗನ ಶರೀರ ಕೈಕಾಲುಗಳೊಂದಿಗೆ ಸೇರಿ ಎಳೆಯ ಜೀವ ಅಸ್ತವ್ಯಸ್ತಗೊಂಡಿತ್ತು. ಅವಳೋಗಿಡ್ಡಿ. ಅವಳಷ್ಟೇ ಉದ್ದದ ಶರೀರವನ್ನು ಹೊತ್ತುಕೊಂಡು ಸುತ್ತಾಡಿ ಅವಳು ಹೈರಾಣಾಗಿ ಹೋಗಿದ್ದಳು. ಒಮ್ಮೆ ಅವಳ [...]
Categories: ಕನ್ನಡ ಪುಟಗಳು
ಮೊಸಳೆಯ ಧ್ಯಾನ..
ಲೋಕೇಶ್ ಮೊಸಳೆ ಸದಾ ಛಾಯಾಗ್ರಹಣವನ್ನು ಧ್ಯಾನಿಸಿದವರು. ಹಾಸನ ಸಮೀಪದ ಮೊಸಳೆ ಎಂಬ ಪುಟ್ಟ ಗ್ರಾಮದ ಇವರು ಈಗ ಮೈಸೂರಿನಲ್ಲಿದ್ದಾರೆ. ಕನ್ನಡ ಶುಭಾಷಯ ಪತ್ರಗಳನ್ನು ಚಾಲನೆಗೆ ತಂದವರು. ಲೋಕೇಶ್ ಧ್ಯಾನಿಸಿದ್ದು ಇಲ್ಲಿದೆ..
Categories: ಕನ್ನಡ ಪುಟಗಳು
ಚಂದಿರನೇತಕೆ ಓಡುವನಮ್ಮ, ಮೋಡಕೆ ಹೆದರಿಹನೆ…
ಮತ್ತೆ ಪ ಸ ಕುಮಾರ್ ನಮ್ಮ ಜೊತೆ. ಕಾಡುವ ಹಲವು ಮಕ್ಕಳ ಕವಿತೆಗಳಿಗೆ ರೇಖೆ ಎಳೆಯುತ್ತಾ. ಇಲ್ಲಿದೆ- ಹೊಯ್ಸಳರ ಅತ್ಯಂತ ಹೆಸರಾದ ಕವಿತೆ ‘ಬಾ ಬಾ ಚಂದಮಾಮ, ಮುತ್ತು ಕೊಡು ಬಾ ಬಾ ಚಂದಮಾಮ..’ ಜಿ ಎನ್ ಲಕ್ಷ್ಮಣ ಪೈ ಅವರ ‘ಮಂಗನ ಮದುವೆ’ ಹಾಗೂ ಹಿರೇಮಠ ಅವರ ‘ಚಂದಿರನೇತಕೆ ಓಡುವನಮ್ಮ, ಮೋಡಕೆ ಹೆದರಿಹನೆ…
Categories: ಕನ್ನಡ ಪುಟಗಳು
ಇಂದಿನ ಚಹಾ ಕೆಟ್ಟು ಹೋಗಿದೆ
ಇವತ್ತು ಕಳೆದೆರಡು ತಾಸುಗಳಿಂದ ಅವಧಿಯಲ್ಲಿರುವ ಭಾಮಿನೀ ಷಟ್ಪದಿ ಮತ್ತು ಲೀಲಾ ಸಂಪಿಗೆಯವರ ಎಲ್ಲಾ ಬರಹಗಳನ್ನು ಓದುತ್ತಿದ್ದೆ. ಜೊತೆಗೆ ಮೊನ್ನೆ ಓದಿದ ಹಕೂನ ಮಟಾಟ ಬೇರೆ ನೆನಪಾಗಿ ಬಿಡ್ತು.
ದಿನವೂ ಕೆಟಕಿಯ ಬಳಿ ಕೂತು ನಾನಿಟ್ಟ ಅಕ್ಕಿ ತಿನ್ನುವ ಗುಬ್ಬಚ್ಚಿಗಳು ಮತ್ತು ಕೆಳಗಡೆ ಆಡುತ್ತಿರುವ ಎಳಸುಗಳನ್ನು ಕಣ್ಣಲ್ಲೇ ತುಂಬಿಕೊಳ್ಳುತ್ತಾ ಚಹಾ ಹೀರುತ್ತಿದ್ದೆ.
ಇಂದಿನ ಚಹಾ ಕೆಟ್ಟು ಹೋಗಿದೆ.
[" Spirit of the heart, quietness and tranquility -- this is what links together the [...]
Categories: ಕನ್ನಡ ಪುಟಗಳು
`ನೀನು ಯಾರ ಮಗ ?’
ಸುಧನ್ವಾ ದೇರಾಜೆಯ ‘ಚಂಪಕಾವತಿ’ ಬ್ಲಾಗ್ನಲ್ಲಿದ್ದ ಈ ಸ್ವಾರಸ್ಯಕರ ಬರಹ ನಿಮಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿಂದ-
ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ, `ನೀನು ಯಾರ ಮಗ ?’ ಎಂಬ ಕೃಪಾಚಾರ್ಯರ ಪ್ರಶ್ನೆಯು, ಕರ್ಣನ ಕಿವಿಗಳಿಗೆ ಕಠೋರವಾಗಿಯೇ ಕೇಳಿತು। ಅವನ ಪರವಾಗಿ ಉತ್ತರಿಸುವದಕ್ಕೆ ಅಲ್ಲಿ ಯಾರೂ ಇರಲಿಲ್ಲ। ತಲೆತಗ್ಗಿಸಿದ, ಹಿಂಜರಿದ, ಮುಜುಗರದ ಮುದ್ದೆಯಾದ. `ನೀವು ದೇವತೆಗಳಿಂದಲೇ ಹುಟ್ಟಿದ ಪಾಂಡವರೇ?’ ಅಂತ ಯಾರೊಬ್ಬನೂ ಕೇಳಲಿಲ್ಲ. ಅವರ ಜತೆ ಋಷಿಗಳಿದ್ದರು, ಕುಂತಿಯಿದ್ದಳು. ಕಾಡಿನಿಂದ ಬಂದವರನ್ನು ಸೇರಿಸಿಕೊಂಡಿತು ಹಸ್ತಿನಾವತಿ . ದೊಡ್ಡವರ ಮಕ್ಕಳಾದರೆ ತಲೆಯೆತ್ತಿ [...]
Categories: ಕನ್ನಡ ಪುಟಗಳು
ಗಿರಿಜಾ ಕಲ್ಯಾಣ
Categories: ಕನ್ನಡ ಪುಟಗಳು
‘ಕಾಮರೂಪಿ’ ಎಂಬ ಎಂ ಎಸ್ ಪ್ರಭಾಕರ್
‘ಕಾಮರೂಪಿ’ ಎಂಬ ಕಾವ್ಯನಾಮದಿಂದ ಹೆಸರಾದ ಎಂ ಎಸ್ ಪ್ರಭಾಕರ್ ಅವರು ತಮ್ಮ ೭೩ ನೆಯ ವಯಸ್ಸಿನಲ್ಲಿ ಬ್ಲಾಗ್ ಅಂಕಣಕ್ಕೆ ಇಳಿದಿದ್ದಾರೆ. ಕನ್ನಡ ಕಂಡ ಒಬ್ಬ ಮಹತ್ವದ ಬರಹಗಾರ ತಮ್ಮ ವಯಸ್ಸನ್ನು ಸೋಲಿಸುತ್ತಾ ಯೌವನಕ್ಕೆ ಕೈ ಚಾಚುತ್ತಿರುವುದು ‘ಅವಧಿ’ಗೆ ಸಂತಸ ತಂದಿದೆ.
ಇತ್ತೀಚೆಗಷ್ಟೇ ಸುಗತ ಶ್ರೀನಿವಾಸರಾಜು ‘ಔಟ್ ಲುಕ್’ ನ ತಮ್ಮ ಅಂಕಣದಲ್ಲಿ ಕಾಮರೂಪಿಯನ್ನು ಪರಿಚಯಿಸಿದ್ದರು. ಈಗ ಅವರ ಬರಹಗಳನ್ನೋಳಗೊಂಡ ಬ್ಲಾಗ್ ನಿಮ್ಮ ಮುಂದಿದೆ. ಸ್ವೀಕರಿಸಿ.
ಅದು, ಇದು
ನಮಸ್ಕಾರ. ಇದು ನನ್ನ ಬ್ಲಾಗ್. ಬ್ಲಾಗ್ ಪದದ ಕನ್ನಡದ ಏನಾದರೂ [...]
Categories: ಕನ್ನಡ ಪುಟಗಳು
ಚಂದಮಾಮನ ಹಿಡಿದು ಗಲ್ಲಿಗೇರಿಸುತ್ತಾರೆ
ರಮೇಶ್ ಸೋಗೆಮನೆ ಮೌನವನ್ನು ಧ್ಯಾನಿಸುವವರು. ಹತ್ತು ಹಲವು ಕನಸುಗಳನ್ನು ಹೊತ್ತವರು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದು ಈಗ ಈಟಿವಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಗೆಮನೆ ಎಂಬುದು ತುಮಕೂರಿನ ಬಳಿಯ ಒಂದು ಪುಟ್ಟ ಹಳ್ಳಿಯಲ್ಲಿರುವ ಒಂದು ಪುಟ್ಟ ಮನೆ. ಈ ಮನೆಯಿಂದಲೇ ಜಗತ್ತನ್ನು ಕಟ್ಟಿಕೊಂಡ ರಮೇಶ್ ವಿಶಿಷ್ಟ ಬರಹಗಾರ. ಅವರು ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ. ಅವರ ಬರಹಕ್ಕಿರುವ ಶಕ್ತಿಯನ್ನು ಧ್ಯಾನಿಸುತ್ತಾ ಅದರ ಸವಿ ಬಡಿಸುತ್ತಿದ್ದೇವೆ.
ಇದು ಕಥೆಯಲ್ಲ
ಚಂದಮಾಮನ ಕಥೆಯಲ್ಲಿ ಸುಲಭಕ್ಕೆ ತಾರೆ ಜಾರುತ್ತಿರಲಿಲ್ಲ. ಸೂರ್ಯ ಸುಡುತ್ತಿರಲಿಲ್ಲ ಸಾಮ್ರಾಜ್ಯ ಆಳಿಯುತ್ತಿರಲಿಲ್ಲ ರಾಜ [...]
Categories: ಕನ್ನಡ ಪುಟಗಳು
ಇವರು ಫುಕುವೋಕಾ ಅಜ್ಜ
‘ನಾನೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಕೃಷಿಕ. ನನ್ನ ಸೈಕಲ್ ಪ್ರವಾಸವೊಂದು ಇತಿಹಾಸದ ಪುಟ ಸೇರಿದೆ. ಇದು ಅನಿಸಿಕೆಗಳ ಹಂಚಿಕೊಳ್ಳಲು ಒಂಥರಾ ಟ್ರಯಲ್ ಇಂಜಿನ್’ ಎನ್ನುತ್ತಾ ‘ಹಳ್ಳಿಯಿಂದ’ ಬ್ಲಾಗ್ ಲೋಕಕ್ಕೆ ಕಾಲಿಟ್ಟವರು ಗೋವಿಂದ ನೆಲ್ಯಾರು.
ಗೋವಿಂದ ಅವರು ಒಂದು ಕಾಲಕ್ಕೆ ಇಡೀ ಜಗತ್ತನ್ನೇ ಸೈಕಲ್ ಮೇಲೆ ತಿರುಗಿ ಬಂದವರು. ಹೀಗೆ ತಿರುಗುತ್ತಾ, ತಿರುಗುತ್ತಾ ಹೋಗುತ್ತಿದ್ದಾಗ ಸಿಕ್ಕವರೇ ಫುಕುವೋಕಾ ಅಜ್ಜ. ಆ ಕಥೆ ಗೋವಿಂದರ ಬಾಯಿಂದಲೇ ಕೇಳಿ…
ನಿನ್ನೆ ಬೆಳಗ್ಗೆ ನನ್ನ ಸಂಚಾರವಾಣಿಗೆ ಪೈಲೂರರಿಂದ ಒಂದು ಸುದ್ದಿ ಬಂತು. [...]
Categories: ಕನ್ನಡ ಪುಟಗಳು
ಥ್ಯಾಂಕ್ಸ್, ಗಡೇಕಲ್ ನಾಗರಾಜ್
ಚೇತನಾ ತೀರ್ಥಹಳ್ಳಿ ಅವರ ‘ಭಾಮಿನಿ ಷಟ್ಪದಿ’ ಪುಸ್ತಕ ಬಿಡುಗಡೆ ಸಮಾರಂಭ ‘ವಿಜಯ ಕರ್ನಾಟಕ’ದ ಛಾಯಾಗ್ರಾಹಕ ಗಡೇಕಲ್ ನಾಗರಾಜ್ ಅವರಿಗೆ ಕಂಡದ್ದು ಹೀಗೆ. ನಾಗರಾಜ್ ಅದನ್ನು ಪ್ರೀತಿಯಿಂದ ‘ಅವಧಿ’ಗೆ ಕಳಿಸಿ ಕೊಟ್ಟಿದ್ದಾರೆ. ಥ್ಯಾಂಕ್ಸ್ ನಾಗರಾಜ್ ..
Categories: ಕನ್ನಡ ಪುಟಗಳು
ಆ ದೀರ್ಘ ಕಪ್ಪು ದಾರಿ ಶಿಖರಕ್ಕೆ ತೆರೆದಿದೆ..
- ಮೂಲ: ಮಸನುಬು ಫುಕುವೋಕಾ
ಅನುವಾದ: ಹರೀಶ್ ಕೇರ
‘ಒಂದು ಹುಲ್ಲಿನ ಕ್ರಾಂತಿ’ ಬರೆದ ಜಪಾನಿನ ಕೃಷಿ ಋಷಿ ಮಸನುಬು ಫುಕುವೋಕಾ, ಒಂದು ಕವಿತೆಯನ್ನೂ ಬರೆದಿದ್ದಾರೆ. ಇದು ಅವರ ‘ದಿ ರೋಡ್ ಟು ನೇಚರ್’ ಕೃತಿಯಲ್ಲಿದೆ. ಫುಕುವೋಕಾ ಅಂಥ ಒಳ್ಳೆಯ ಕವಿಯೇನಲ್ಲ ಅಂತ ಆ ಪದ್ಯ ಓದಿ ಅನಿಸಿತಾದರೂ, ಅದರ ಸರಳತೆ, ಪ್ರಾಮಾಣಿಕತೆಗಳಿಂದಾಗಿ ತುಂಬಾ ಇಷ್ಟವಾಯಿತು. ನಿಮಗೂ ಓದಿಸೋಣ ಅಂತ ಅನುವಾದಿಸಿದೆ.
ನನ್ನ ಹಾಡು
ಎಷ್ಟು ವರ್ಷಗಳ ಕಾಲ ನಾನು ಅಲೆದೆ ಇಲ್ಲಿ
ಎಲ್ಲಿ ಏನೂ ಇರದೋ ಅಲ್ಲಿ
ಹುಡುಕುತ್ತ ಅದೇನನೋ.
ಗಾಢ ಸೈಪ್ರಸ್ ಮರಗಳ ಅರಣ್ಯದಲ್ಲಿ [...]
Categories: ಕನ್ನಡ ಪುಟಗಳು
ಎಕ್ಸಲೆಂಟ್ ಮಗಾ !
subramani
etv.subbu@gmail.com |
ಪ್ರಜಾವಾಣಿ ಆಫೀಸಿಗೆ ಹಾಗಾಗ ಹೋಗುತ್ತಿದ್ದ ನನಗೆ ಮತ್ತು ರಾಘವೇಂದ್ರಗೌಡನಿಗೆ
ಬರೆಯುವ ಅಭ್ಯಾಸ ಇದ್ದರೆ ಈ ಕಡೆ ಬನ್ನಿ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು
ಸಿರಿಸ್ಸೆ ಆಗಿ ಮಾಡಲು ಪ್ರಯತ್ನಿಸುತ್ತಿದ್ದೆವು.ಅವರ ಹೇಳಿದ ಮಡ್ ಬಾತ್ ಕಥೆ ಕೇಳಿ
ನಾನು ಮಣ್ಣು ಮೆತ್ತಿಕೊಂಡು,ರಾಘ ತೆಗೆದ ಫೋಟೋ ಅವರಿಗೆ ತೋರಿಸಿದ್ದೇವು.ನೋಡಿ
ಪ್ರಯನ್ನ ಚನ್ನಾಗಿದೆ ಎಂದು ನಕ್ಕರು.ಫೋಟೋಗ್ರಾಫಿ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.
ಹೀಗೆ ಒಂದು ದಿನ ಅವರ ಮೈತ್ರಿ ಫಾರಂಗೆ ಹೋಗಿದ್ದೇವು.ಪರಿಸರ,ನಗರೀಕರಣದ ಬಗ್ಗೆ
ಅವರ ಮಾತಿನ ಲಹರಿ ಹರಿದಿತ್ತು.ಮಕ್ಕಳಂತೆ ಕುಳಿತು ಆಲಿಸಿದೇ ಒಂದು ಖುಷಿ.
+++
sidrapal
sidrapal@rediffmail.com |
hi, ganadhalu, its [...]
Categories: ಕನ್ನಡ ಪುಟಗಳು
ಓವನಲ್ಲಿ ಮಾಡಿದ ಬಿಸ್ಕತ್ ಗಳಿಗಿಂತ ಇವು ರುಚಿಯಾಗಿರುತ್ತಿದ್ದವು..
ಮಂಜುನಾಥ ಸ್ವಾಮಿ ಎಂಬ ಸ್ವಯಂಘೋಷಿತ ‘ಚಿತ್ರದುರ್ಗ ಎಕ್ಸ್ ಪ್ರೆಸ್’ ತನ್ನ ರೂಮಿನಲ್ಲಿ ಚಿತ್ರದುರ್ಗದವರನ್ನೇ ಒಟ್ಟು ಮಾಡಿಕೊಳ್ಳುವಾಗ ಈ ಸಮಸ್ಯೆ ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ. ಅಡಿಗೆ ಮಾಡುತ್ತಾ ಕೂರುವ ಯೋಗ ಇವರಿಗೆ ಸಿಕ್ಕಿದೆ. ಹಾಗಾಗಿಯೇ ತಮ್ಮ ಬ್ಲಾಗ್ನಲ್ಲಿ ಅಡುಗೆ ರುಚಿಯನ್ನೂ ಬಡಿಸುತ್ತಿದ್ದಾರೆ. ಇಲ್ಲಿದೆ ಅವರ ಬೆಣ್ಣೆ ಬಿಸ್ಕೆಟ್ ಬರಹ.
ಬದಾಮಿ ಪರಿಚಯ ಮಾಡಿಸುತ್ತಾ, ಹಟ್ಟಿ ಚಿನ್ನದ ಗಣಿಯಲ್ಲಿರುವ ನನ್ನ ಮಾವ ರವಿ ಕುಮಾರ್ ಬಗ್ಗೆ ಹೇಳಿದ್ದೆ. ಅವರ ಮನೆಯಲ್ಲಿ ಕಳೆದ ಎರಡು ದಿನಗಳು ತುಂಬಾ ದಿನ ನೆನಪಿನಲ್ಲಿರುವಂತಹ ದಿನಗಳು. ಗಣಿಯಲ್ಲಿ [...]
Categories: ಕನ್ನಡ ಪುಟಗಳು
ಚೇತನಾ ಎಂಬ ‘ಭಾಮಿನಿ’
ಚೇತನಾ ತೀರ್ಥಹಳ್ಳಿ ಅವರ ಕಥಾ ಸಂಕಲನ ‘ಭಾಮಿನಿ ಷಟ್ಪದಿ’ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅದರ ಆತ್ಮೀಯ ಕ್ಷಣಗಳು ಇಲ್ಲಿವೆ.
Categories: ಕನ್ನಡ ಪುಟಗಳು
ಹಸಿವೆ ಆಯ್ತಂತಾ ಸಿಕ್ಕಿಸಿಕ್ಕಿದ್ದನ್ನು ತಿನ್ನೋಕ್ಕಾಗತ್ತಾ…
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
…………….ಮಗ………….
ಯಾಕೋ ನೀವು ತುಂಬಾ ಇಷ್ಟ ಆಗ್ತಾ ಇದ್ದೀರಿ
ನಾನು ಆಶ್ಚರ್ಯದಿಂದ ನೋಡಿದೆ.
ನಿಮ್ಮನ್ನು ನಾನೀಗ ಪ್ರೊಪೋಸ್ ಮಾಡಿದರೆ ನೀವು ಬೈಯ್ಯಲ್ಲ ತಾನೆ
ಸಿಲ್ಲಿ ಎಂದು ನಕ್ಕೆ. ನನಗಿಂತ ಏನಿಲ್ಲಾ ಅಂದ್ರೂ 8 ವರ್ಷ ಚಿಕ್ಕವನು. ಈ ರೀತಿ ಯೋಚನೆ ಕೂಡ ಬರಬಾರದು ನಿಂಗೆ.
ನೀವು ಯಾವುದೋ ಕಾಲದಲ್ಲಿದ್ದೀರಾ
ಅವನ ಉತ್ತರ ಅಸಹ್ಯ ಹುಟ್ಟಿಸಿತು.
ನೀವು ತುಂಬಾ ಚೆನ್ನಾಗಿದ್ದೀರಿ
ಬಿಹೇವ್ ಯುವರ್ ಸೆಲ್ಪ್…ನಾನು ಕೆಂಗಣ್ಣು ಬೀರಿದ್ದೆ. ಅಷ್ಟೊತ್ತಿಗಾಗಲೇ ಅವಳಮ್ಮ ಒಳಗೆ ಬಂದಿದ್ದು, ಅವನು ಸುಮ್ಮನಾಗಿಬಿಟ್ಟಿದ್ದ. ಹಾಗೇ ಸ್ವಲ್ಪ ಹೊತ್ತು ಟಿ.ವಿ. [...]
Categories: ಕನ್ನಡ ಪುಟಗಳು
