ಪ್ರೌಢಲೇಖನಗಳ ರಹಸ್ಯ ಮತ್ತು ಪ್ರೌಢಲೇಖಕರ ರಹಸ್ಯ.
ಪ್ರೌಢಲೇಖನಗಳೆಂದರೆ ಪ್ರೌಢಶಾಲೋತ್ತೀರ್ಣರಾದವರಿಗೂ ಅರ್ಥಕಾರ್ಯಸಾಹಸವಾಗುವಂತವು. ಹಾಗೂ ಅದರ ಲೇಖಕರು ಬಹುಪಠಣದಿಂದ ಉಲ್ಲೇಖಿಸುವ ಮಹತ್ತರ ಅಂಶಗಳನ್ನು ಅರ್ಥೈಸಿಕೊಳ್ಳಲು ಅವರಷ್ಟೇ ಪುಸ್ತಕಪಠಣಾನಿವಾರ್ಯವಾದವು. ಮುಂದೆ ಓದಿ »
ಕನ್ನಡದಲ್ಲಿ ಓಸಿಆರ್ ಇದೆಯೇ?
ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ? ಮುಂದೆ ಓದಿ »
ವಿಪಿನಸಂವಾದ
ನಾವು ಬಹುಬಾರಿ ಕಾರ್ಯಾನಗತ್ಯವಸ್ತುವಿಷಯಗಳನ್ನು ಉದ್ದೇಶಿಸಿ ದೀರ್ಘಾತಿದೀರ್ಘಾಸಂಭಾಷಣಾರತರಾಗಿ ಕಾಲಯಾಪರಾಗುವೆವು. ಅಂತಹ ಸಂವಾದಗಳಿಗೆ ವಿಪಿನಸಂವಾದ ಎಂದು ಉವಾಚಿಸುವರು.
ಈ ವಿಪಿನಸಂವಾದರತರನ್ನು ವಿಪಿನಸಂವಾದಿಗಳೆನ್ನುವರು. ಈ ವಿಪಿನಸಂವಾದದ ಲಕ್ಷಣದ ಪ್ರಸ್ಥಾಪಿತವಿಷಯಪುನಃಪ್ರಸ್ಥಾಪನೆ ಮತ್ತು ನಿರ್ಣಾಯಾತೀತಸಂಭಾಷಣೆ. ಮುಂದೆ ಓದಿ »
ನನ್ನ ಅನುನಾಯಿ
ನನ್ನ ಅನುನಾಯಿ....
ಏನಿದು ಅನುನಾಯಿ, ಅನುನಾಯಿ ಅಂದರೆ ನಾಯಿಯ ಹಾಗೆ ಅನುಸಿರಿಸಿ ಹಿಂದೆ ಬಿದ್ದಿರುವ ಸಂಗತಿ.. ಇದರ ನಿಷ್ಪುತ್ತಿ ಇತ್ಯಾದ ಶಿರಭಗ್ನವಿಷಯಗಳನ್ನೆಲ್ಲ ತ್ಯಜಿಸಿ ಹಾಕಿ! ಮುಂದೆ ಓದಿ »
ಒಂದು ದಿನ..
ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ನಮ್ಮ ರಾಜಕಾರಣ, ಪ್ರಜಾಪ್ರಭುತ್ವದ ಪ್ರಮುಖ ಸಮಸ್ಯೆಗಳು, ತೊಂದರೆಗಳು, ಯಾವುವು ಎಂದರೆ ಅನ್ನ,ವಸತಿ,ಉದ್ಯೋಗ, ಸಾರಿಗೆ ಅದು ಇದು ಎಂದು ಹೇಳುವುದು ಬರೀ ಬಾಯಿಮಾತಿಗೆ..
ಆದರೆ ನಾಯಕರು ಅತಿಶೀಘ್ರವಾಗೇ ಪರಿಹರಿಸಬೇಕಾದುದು
ಆ ಸೇತುವೆಯನ್ನ ರಾಮ ನಿರ್ಮಿಸಿದ್ದ ಇಲ್ಲವಾ?
ಈ ಶಿವನ ಗುಹೆಗೆ ಹೋಗಬೇಕ ಬೇಡವಾ?
ಹೀಗೆ ಇವೇ... ಮುಂದೆ ಓದಿ »
ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
(ನಗೆ ನಗಾರಿ ಸಾಹಿತ್ಯ ಬ್ಯೂರೋ) ಮುಂದೆ ಓದಿ »
ಎಕ್ಸ್’ಕ್ಯೂಸ್ ಮಿ...
"ಏನು" ಎನ್ನುವಂತೆ ಅವನ ಮುಖನೋಡಿದೆ.
"ಸರ್.. Excuse me ಸರ್.. " ಎಂದ..
ಈ ಬಾರಿ ಬಾಯಿಬಿಟ್ಟು "ಏನು" ಎಂದು ಕೇಳಿದೆ.
ಧೈರ್ಯ ಬಂದವನಂತೆ ಸ್ವಲ್ಪ ಚುರುಕಾಗಿ ನನ್ನ ಪಕ್ಕ ಬಂದು ನನಗೆ ಅವನ ಮುಖ ಕಾಣುವಂತೆ ನಿಂತುಕೊಂಡ. ಕೈಯಲ್ಲಿ ೧೦ರೂ. ನ ಮೂರ್ನಾಲ್ಕು ನೋಟು ಹಿಡಿದುಕೊಂಡಿದ್ದ ಆ ಹುಡುಗ. ಇಲ್ಲಿ ಬರೆದರೆ ನಾಲ್ಕೈದು ಸಾಲಾಗಬಹುದಾದಂತಹ ಒಂದು ಉsssದ್ದ ವಾಕ್ಯವನ್ನು ಕೈಕಟ್ಟಿಕೊಂಡು, ಹೇಳಿದ. ಒಮ್ಮೆ ಹೇಳಿದ್ದನ್ನೆ ಮತ್ತೊಮ್ಮೆ ಇಂಗ್ಲೀಷಿನಲ್ಲಿ ಹೇಳಿದ.
ಸಾರಾಂಶ ಏನಪಾ ಅಂತಂದ್ರೆ: ಅವನಿಗೆ ಶಾಲೆಗೆ ಹೋಗಲು ದುಡ್ಡಿಲ್ಲಿದ್ದರಿಂದ ಸಹಾಯ ಕೇಳುತ್ತಿದ್ದ..
ಸರಿ..
"ಮನೆ ಎಲ್ಲಿ?" ಎಂದೆ.
"ಇಲ್ಲೇ ಸಾರ್, ಗಾಯತ್ರಿ ನಗರ" ಎಂದ.
"ಊಟ ಆಯ್ತಾ" ಎಂದರೆ... ಮುಖದಲ್ಲಿ ವಿಚಿತ್ರ ಬಾವನೆ ಮೂಡಿಸಿ ತಲೆ ಕೆರೆದುಕೊಳ್ಳುತ್ತಾ.. "ಸಾರ್, ಸ್ಕೂಲ್ ಫೀಸು" ಎಂದು ರಾಗ ಎಳೆದ.
"ಗಾಯತ್ರಿ ನಗರ ತಾನೆ? ನಾನೆ ಬಿಡ್ತೀನಿ ಮನೆಗೆ ಇಲ್ಲೇ ಇರು, ಹೋಗೋಣ" ಎಂದು ಅವನ ಮುಖವನ್ನೇ ಗಮನಿಸಿದೆ. ಈ ಮಾತಿನಿಂದ ಅವನು ಆಶ್ಚರ್ಯಗೊಂಡಿದ್ದು ಮಾತ್ರವಲ್ಲ ಸ್ವಲ್ಪ ಹೆದರಿಕೊಂಡಂತೆ ಕಂಡುಬಂದ.
ಒಂದರ್ಧ ನಿಮಿಷ ಸುಮ್ಮನಿದ್ದವನು, ನಂತರ ಹೇಳಿದ..
"ಸಾರ್, ಮನೆ ಇರೋದು ಇಲ್ಲಲ್ಲ; ಮತ್ತೀಕೆರೆಲ್ಲಿ. ಇಲ್ಲಿ ಅಜ್ಜಿ ಮನೆಗೆ ಬಂದಿದ್ದೆ ಅಷ್ಟೆ."
ನನ್ನ ಮನಸ್ಸಿನಲ್ಲಿ ಏನೋ ತಿಳಿಯದ ಅನುಮಾನ ಮೂಡುತ್ತಿತ್ತು. ಹಾಗೆಂದೇ ಹೇಳಿದೆ
"ನನ್ನ ರೂಂಮೇಟು ಅಲ್ಲಿಗೇ ಹೋಗ್ತಾ ಇದಾನೆ. ಇಷ್ಟೊತ್ನಲ್ಲಿ ಒಬ್ನೇ ಹೇಗ್ ಹೋಗ್ತೀಯ, ಅವ್ನು ಬಿಡ್ತಾನೆ"
"ಬ್ಯಾಡ ಸಾರ್, ಸುಮ್ನೆ ಯಾಕ್ ತೊಂದ್ರೆ" ಎಂದು ನಕ್ಕವನೇ ಅತ್ತ ತಿರುಗಿ ಹೊರಟುನಿಂತ..
ಅವನು ಕೇಳಿದ ದುಡ್ಡಿಗೆ ನಾನೇನೂ ಉತ್ತರವನ್ನೇ ಹೇಳಿರಲಿಲ್ಲ.
"ಇರು ಕೈತೊಳ್ಕೊಂಡ್ ಬರ್ತೀನಿ" ಎನ್ನುವಷ್ಟರಲ್ಲೆ ಅವನು ಫುಟ್ಪಾತಿನಲ್ಲಿ ಜೋರು ಜೋರು ಹೆಜ್ಜೆಯಿಡುತ್ತಾ ಹೋಗುತ್ತಿರುವುದು ಕಂಡಿತು.
ಅವಸರದಲ್ಲಿ ಕೈತೊಳೆದು ಅವನು ಹೋದ ದಿಕ್ಕಿನಲ್ಲೇ ಸರಸರನೆ ನಡೆದು ಎಲ್ಲಾದರು ಕಾಣುತ್ತಾನೆನೊ ಎಂದು ನೋಡಿದೆ. ಎದುರಿನ ಬಸ್ ಸ್ಟ್ಯಾಂಡಿನಲ್ಲೂ ಇರಲಿಲ್ಲ.. ಮತ್ತೀಕೆರೆಗೆ ನಡೆದುಕೊಂಡು ಹೊರಟಿರುವ ಸಾದ್ಯತೆಯೂ ಕಡಿಮೆಯೆ.
ಏನೋ, ತಲೆಯಲ್ಲೆಲ್ಲಾ ಗೊಂದಲವೇ ತುಂಬಿದಂತಾಗಿ, ಒಮ್ಮೆ ಜೋರಾಗಿ ತಲೆಕೊಡವಿ ಮರಳಿ ಹೋಟೆಲ್ ಬಳಿಹೋಗಿ ಒಂದು ಬಿಳಿ ಎಲೆ ಸ್ವೀಟ್ ಹಾಕಿ ಮೋಡದ ಮರೆಯ ಚಂದಿರನನ್ನೇ ನೋಡುತ್ತಾ ಮನೆಕಡೆ ನಡೆದೆ..© Sandeepa Nadahalli
ಹೀಗೇ ಒಂದಿಷ್ಟು ಮಾತುಕತೆ
ಹೊರಗಡೆ ಏನೋ ಸದ್ದಾಯ್ತು. ಗುಂಯ್ ಗುಂಯ್ ಎಂದು ಸದ್ದು ಇನ್ನೂ ಜೋರಾಯಿತು. ಹೊರಗೆ ಸಮೀಪದಲ್ಲಿ ವಿಮಾನವೊಂದು
ಹಾರುತ್ತಿತು ಅದರದ್ದೇ ಆ ಗಲಾಟೆ. ನನ್ನ ಯಾವತ್ತಿನ ಅಭ್ಯಾಸದಂತೆ "ಹೇಯ್ ಬಾರೆ ದೀಕ್ಷಾ ಹೊರಗೆ ನೋಡು ಏನೋ ಶಬ್ದ. ಏನೋ ತೋರ್ಸ್ತಿ ಬಾ " ನಾನು ಕೂಗಿದೆ. ಅವಳಿಗೆ ವಿಮಾನ ತೋರಿಸಬೇಕು ಅಂತ ನಾನು ಬಹಳ ಉತ್ಸಾಹದಲ್ಲಿದ್ದೆ. ಆದರೆ ನನ್ನಆಶ್ಚರ್ಯಕ್ಕೆ ಅವಳು ಯಾವುದೇ ಉತ್ಸಾಹ ತೋರದೆ ಬಹಳ ಉದಾಸೀನ ಭಾವದಲ್ಲಿ "ಏ ಅದು ಬೇರೆ ಏನೂ ಅಲ್ಲ. ವಿಮಾನಹೋಗ್ತಾ ಇದೆ ಅದರದ್ದೇ ಶಬ್ದ ಅಷ್ಟೆ." ಅಂದಳು ನನಗೆ ಅಷ್ಟೂ ಗೊತ್ತಿಲ್ಲ ಎಂಬಂತೆ.
ಅಷ್ಟು ಪುಟಾಣಿ ಹುಡುಗಿಯ ಕೈಯಲ್ಲಿ ನಂಗೆ ಮಂಗಳಾರತಿ ಆಗಿತ್ತು. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿಯಂತೆ ಆರಿ ಹೋಗಿತ್ತು. ಈಗಿನ ಮಕ್ಕಳನ್ನು ನಮ್ಮ ಬಾಲ್ಯ ಕಾಲದ ಮಕ್ಕಳಂತೆ ಹೋಲಿಸಿಕೊಂಡು ನಾನು ಅವಳನ್ನು ಕೂಗಿದ್ದು ನನ್ನ ತಪ್ಪೇ ಆಗಿತ್ತು.
ಈಗಿನ ಮಕ್ಕಳಿಗೆ ಆಶ್ಚರ್ಯ ಎನ್ನುವುದು ಯಾವುದೂ ಉಳಿದಿಲ್ಲ ಅಂತ ನನ್ನ ಭಾವನೆ. ಉದಾಹರಣೆಗೆ ಈ ವಿಮಾನವೇ. ನಾವೆಲ್ಲ
ಚಿಕ್ಕವರಾಗಿದ್ದಾಗ ಆಕಾಶದಲ್ಲಿ ಒಂಚೂರು ಶಬ್ದವಾದರೂ ಸಾಕು ಆ ಪಿಳ್ಳೆಯಂತೆ ಕಾಣುತ್ತಿದ್ದ ವಿಮಾನವನ್ನು ನೋಡಲು ಎಲ್ಲಿದ್ದರೂ
ಓಡಿ ಹೊರಗೆ ಬಂದು ಮೇಲೆ ನೋಡುತ್ತಿದ್ದೆವು. ಎಲ್ಲಾದರೂ ನಮಗೆ ಅದು ಕಾಣದೇ ಬೇರೆಯವರಿಗೆ ಮಾತ್ರ ಕಂಡುಬಿಟ್ಟಿದ್ದರೆ
ಬೇಜಾರಾಗುತ್ತಿತ್ತು. ಈಗಿನ ಮಕ್ಕಳು ವಿಮಾನವನ್ನು ಆಕಾಶದಲ್ಲಿ ನೋಡುವುದೇನು ಎಷ್ಟೋ ಸಲ ವಿಮಾನದಲ್ಲಿ ಕೂತು ಹಾರಾಡಿಯೂ ಇರುತ್ತಾರೆ. ಬೆಂಗಳೂರಿನಂತ ಊರಲ್ಲಿ ದಿನಾ ಬೆಳಗಾದರೆ ಆಕಾಶದಲ್ಲಿ ಎಷ್ಟೋ ವಿಮಾನ ಹಾರುತ್ತಿರುವುದು ಬೇಡಅಂದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದಕ್ಕೇ ಅವರಿಗೆ ನಮ್ಮಂತೆ ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ.
ಈಗಿನ ಮಕ್ಕಳಿಗೆ ಇಂಥದ್ದು ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ. ಅದೇ ಕಾರಣಕ್ಕೆ ಆ ಮಕ್ಕಳಿಗೆ ನಮ್ಮಂತೆ ನಾನು ದೊಡ್ಡವಳಾದ ಮೇಲೆ ದುಡಿಯುವಂತವಳಾದ ಮೇಲೆ ಇಂಥದ್ದನ್ನು ನಾನೇ ತಗೋಬೇಕು" ಅನ್ನುವ ಆಸೆ, ಭಾವನೆಬರುವುದೇ ಇಲ್ಲವೇನೋ ಬಹುಷಃ .
ಇದು ಒಂದು ಉದಾಹರಣೆಯಷ್ಟೇ. ಎಲ್ಲವೂ ಕೈಗೆಟುಕುವುದರಿಂದ ಇನ್ನೂ ಎಷ್ಟೋ ವಿಷಯಗಳಲ್ಲಿ ಮಕ್ಕಳಿಗೆ ಕುತೂಹಲವೆ
ಉಳಿದಿಲ್ಲ. ಈ ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ! ವಯಸ್ಸಿಗೆ ಮೀರಿ ಎಲ್ಲವೂ ಈಗಿನ ಮಕ್ಕಳಿಗೆ
ಗೊತ್ತಿರುತ್ತದೆ. ನಮ್ಮಂತೆ ಆಕಾಶ ನೋಡಿ ಚಂದ್ರ ನಕ್ಷತ್ರಗಳನ್ನು ನೋಡಿ ಆನಂದಿಸೋ ಮನಸ್ಥಿತಿ ಯಾರಿಗೂ ಇಲ್ಲ. ಅದರಲ್ಲೇನಿದೆ
ಅನ್ನುವ ನಿರ್ಭಾವುಕ ಮನೋಭಾವ. ನೀತಿ ಕಥೆಗಳು, ಪದ್ಯಗಳು ಯಾರಿಗೆ ಬೇಕಾಗಿದೆ ಈಗ ? ಅವು ಏನೆಂದೇ ಗೊತ್ತಿಲ್ಲ. ನಮ್ಮ
ಕಾಲದ ಕಾಗಕ್ಕ ಗುಬ್ಬಕ್ಕಗಳೆಲ್ಲ ಎಲ್ಲಿಗೋ ಹಾರಿ ಹೋಗಿ ಬಹಳ ವರ್ಷಗಳಾಗಿಬಿಟ್ಟಿದೆ. ಹೀಗೆಲ್ಲ ಯೋಚಿಸಿದಾಗ ಬೇಜಾರಾಗುತ್ತದೆ
ನನಗೆ.
ದಿನಾ ಸಂಜೆ ಟೆರೆಸ್ ಮೇಲೆ ಸುಮ್ಮನೇ ಗಾಳಿಗೆ ಮೈಯೊಡ್ಡಿ ನಿಂತು ಲಹರಿಯಲ್ಲಿ ಯೋಚಿಸುತ್ತಿರುವಾಗ ದೀಕ್ಷಾ ಪುಟ್ಟಿ ಬಂದರೆ
ಅವಳಿಗೆ ಆಕಾಶ ನಕ್ಷತ್ರ ಚಂದ್ರ ಎಲ್ಲ ತೋರಿಸಿ ಕಥೆ ಹೇಳ್ತಿದ್ದೆ. ಮೊದ ಮೊದಲು ಉತ್ಸಾಹ ತೋರಿಸದೇ ಕೀಟಲೆ ಮಾಡುತ್ತಿದ್ದವಳು ಆಮೇಲೆ ತುಂಬ ಕುತೂಹಲದಿಂದ ಕೇಳುತ್ತಿದ್ದಳು. ನಡು ನಡುವೆ ಮುದ್ದು ಬರುವಂತೆ ಮುಗ್ಧ ಪ್ರಶ್ನೆಗಳು. ಹಾಗೆಯೇ ಒಂದು ದಿನ ಆಕಾಶದತ್ತ ಮುಖ ಮಾಡಿದವಳೇ "ಹಾ . ನಿಮ್ಮನೆ ಚಂದ್ರ ಎಷ್ಟು ದೊಡ್ದಕ್ಕಿದ್ನೆ ! ನಮ್ಮನೆ ಚಂದ್ರ ಸಣ್ಣಕಿದ್ದ ! ಎಂತಕ್ಕೇನಾ !" ಅಂದಳು. ನಂಗೆ ನಗು ಮತ್ತು ಅವಳ ಮೇಲೆ ಮುದ್ದು ಎರಡೂ ಉಕ್ಕಿ ಬಂತು. ನನಗೆ ಮಕ್ಕಳು ಇಂಥ ಕುತೂಹಲಿ ಮತ್ತು ಮುಗ್ಧಭಾವದವರಾಗಿದ್ದಾಗಲೇ ಇಷ್ಟವಾಗೋದು. ಅವಳ ಪ್ರಶ್ನೆಗೆ ಅವಳಂತೆಯೇ ಮುಗ್ಧವಾದ ಉತ್ತರವನ್ನಿತ್ತು , ಅದಕ್ಕೆ ಅವಳು ಕೇಳಿದಇನ್ನಷ್ಟು ಮುಗ್ಧ ಪ್ರಶ್ನೆಗಳಿಗೆ ಮತ್ತೆ ಉತ್ತರ ಹುಡುಕುತ್ತ , ಅವಳು ಹೇಳಿದ ಚಂದಕ್ಕಿಮಾಮ - ಚಕ್ಕುಲಿಮಾಮನ ಕಥೆಯನ್ನು ಮನದಣಿಯೆ ಆನಂದಿಸಿದೆ.
ಮೊನ್ನೆ ಯಾಕೋ ವಿಮಾನದ ಕಥೆ ಮತ್ತು ಚಂದಕ್ಕಿಮಾಮ - ಚಕ್ಕುಲಿಮಾಮಾನ ಕಥೆ ಬಹಳ ನೆನಪಾಗುತ್ತಿತ್ತು, ನೆನಪು ಇಲ್ಲಿ ಅಕ್ಷರವಾಯ್ತು.
ಮರಣವೇ ನೀನೇಕೆ ಕಾಡುವೆ?
ಮರಣವೇ ನೀನೇಕೆ ಕಾಡುವೆ
ನಿನಗೆ ನೀಡಲು ನನ್ನೊಡಲಲ್ಲಿ
ಏನಿದೆ ಹೇಳು?
ಬರೀ ಮಾಂಸದ ಮುದ್ದೆ
ದೇಹದಲಿ, ರಕ್ತ ಹೀರಲು ಬರುವಿಯಾ ನೀನು
ಅದೂ ಖಾಲಿಯಾಗಿದೆ ಎಂದೋ
ನರವ್ಯೂಹಗಳಲ್ಲಿ ಜಾಲಾಡಿದರೆ
ನಿನಗೆ ದಕ್ಕಬಹುದು ಒಂದಿಷ್ಟು
ಧಮನಿಗಳಲ್ಲೋಡುತಿಹ ಕಿಚ್ಚಿನಾ ಕಿಡಿಗಳು
ಎಚ್ಚರಿಕೆ! ತರಬಹುದು ಇದು ನಿನಗೆ ಆಘಾತ!!
ನಾನಂದು ನಿನ್ನ ಕಾಲ್ತುಳಿತದೊಳು ಮುಂದೆ ಓದಿ »
ಸ್ತ್ರೀಸೌಂದರ್ಯ
ಮೊಗಮೊ ಮರಲ್ದ ತಾಮರೆಯೊ
ನಗಮೊ ಪೊಱಗುಗುವ ಪೆರ್ಮೊಲೆಯೊ
ಪೆಗಲೊ ಮರಂ ಸುತ್ತಿದ ಬಳ್ಳಿಯೊ
ಸೊಗಸಿಯ ಸೊಬಗದೇಂ ಬಣ್ಣಿಪೆನೊ
ತೆರೆ, ತೆಱೆ
ತೆರೆ=ಪರದೆ
ತೆಱೆ=ಮುಚ್ಚಿದ್ದನ್ನು ತೆಗೆ, ಅನಾವರಣಗೊಳಿಸು
ಉದಾಹರಣೆ:- ಕದ ತೆಱೆ= ಬಾಗಿಲು ತೆಗೆ.
ಮನದೊಳಗಿನ ಅಜ್ಞಾನದ ತೆರೆ ತೆಱೆದಾಗಲೆ ಅಱಿವಾಗುವುದಲ್ತೇ?
ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ…
ಕುತೂಹಲಕ್ಕೊಂದು ಕಣ್ಣು
"ಕನ್ನಡ+ತಮಿಳ್" = ?
ಬಹಳ ಹಿಂದೆ "ಕನ್ನಡ+ತಮಿಳ್" ಎರಡೂ ನಾಡಿನಲ್ಲಿ ಒಂದೇ ನುಡಿ ಇದ್ದಾಗ ಬಳಸುತ್ತಿದ್ದ ನುಡಿಯ ಹೆಸರೇನು?
ಇದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಎಣಿಸುತ್ತೇನೆ..
--ಶ್ರೀ
ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
ಸಂಪದ ದಲ್ಲಿ ಕೆಲವು ನಾಳುಗಳ ಹಿಂದೆ ಮಾತುಕತೆ ಆಗಿತ್ತು ಹುಡುಕಿದರೆ ಸಿಕ್ತಾ ಇಲ್ಲ..
--ಶ್ರೀ
ನೆನಪುಗಳು
ಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ,
ತಂಗಾಳಿಯ ತಂಪನ್ನ ಸವಿಯುವುದಿಲ್ಲ,
ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ,
ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ,
ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ್ಲ,
................................................ಆದರೆ
ಹೇಗೆ ಗೆಳೆಯ ಉಸಿರಾಡುವುದ ನಿಲ್ಲಿಸಲಿ,
ಕಾಡಬೇಡ ಹೀಗೆ, ಬೇಡ ನಿನ್ನ ನೆನಪುಗಳ ಮುಂದೆ ಓದಿ »
ಕನಸಾ,,,,,,,,,,,,,,,,
ಬಯಸಿದ್ದಲ್ಲ, ತಾನಾಗೆ ದೊರಕಿದ್ದು ,
ತಾನಾಗೆ ದೂರವಾಗೆ ಅಸಹಜತೆ ಎನಿಲ್ಲ,
ತನ್ನದಲ್ಲ, ತನ್ನದು ಆಗಿರಲಿಲ್ಲ,
ತನ್ನದಾಗೆ ಉಳಿಯುವ ಬಯಕೆಯನ್ನು ಕೊಟ್ಟಿರಲಿಲ್ಲ,
ನನ್ನವ ನೀ ನಾಗಲಾರೆ,
ಗೆಳೆಯನಾಗಿ ಬಯಸಿದ್ದೆ, ಇನಿಯನಾಗಲ್ಲ,
ಸ್ನೇಹ ಹಸ್ತವ ಚಾಚಿದ್ದೆ, ಪ್ರೇಮದ್ದಲ್ಲ,
ದೂರಾಗೆ ನೋವಾಗುವುದು ಸಹಜ,
ಈ ಬದುಕಲಿ ಎಲ್ಲ ನಿಜ ನಿಜ ನಿಜ ಅಷ್ಟೆ ಅಲ್ಲವ, ಗೆಳೆಯ, ಮುಂದೆ ಓದಿ »
ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
http://enguru.blogspot.com/2008/07/blog-post_23.html
ಏನ್ ಗುರು ಬ್ಲಾಗಲ್ಲಿ ಈ ಹೊ ಹೊ ಹೊ ಬಗ್ಗೆ ಬರೆದಿದ್ದಾರೆ. ನನಗೆ ಇನ್ನೂ ಓದಲನುವಾಗಿಲ್ಲ..
ಅಂಕಿತ, ಸಪ್ನದಲ್ಲಿ ಬಂದಿದೆಯಾ?
ಕೊಂಡವರು ತಿಳಿಸಿರಿ..
ಓದಿದವರು ಅದರ ಒಣನೋಟವನ್ನು ಹೇಳಿ ತೋರಿಸಿರಿ.
ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
"The mother earth has everything for man's aid; but not for his greed!"
-Mahatma Gandhiji.
ಸಂಪೂರ್ಣ ಮಲೀನವಾಗಿ ನಿಂತ ಧಾರವಾಡದ ಕೆಲಗೇರಿ ಕೆರೆಯ ಶೋಚನೀಯ ಸ್ಥಿತಿ ನಮ್ಮ ದುರಾಸೆಯ ಮುಖವಾಡ ಕಳಚಿ, ವಸ್ತುಸ್ಥಿತಿಯತ್ತ ಗಮನಹರಿಸಲು ಒತ್ತಾಯಿಸುತ್ತದೆ. ಮುಂದೆ ಓದಿ »


From Udyavara we headed towards our next destination - Kunjarugiri, a hillock (giri = hill, mountain) with temple of Goddess Durga atop. One can reach the top either by steps (a hundred or so) or by road. Though we wanted to climb the hills, we didn't want to risk our luggage on the bikes with so many monkeys around. There were so many monkeys near the temple, I stood gaurd near our bikes while Srik went inside the temple. And later we switched. To the west of Kunjarugiri, there is another smaller hillock. And there is a temple of Parashurama.
From there we visited Pajaka, the birth place of Sri Madhvacharya, the founder of the Dvaita school of philosophy. He is the one who installed the deity of Sri Krishna at Udupi. A priest volunteered and took us on a guided tour. It is said that Sri Madhvacharya used to visit the Durga temple everyday & worshipped the goddess. Listening to the stories and the legends, took me to my childhood days of reading books and comics. And how we tried enact or immitate the mythological heroes.
After traveling 500+KMs in todays and visiting many places, we were tired. We reached Srikanth's Aunt's house in Surtakal. Before calling it a day, we met another fellow blogger 

